ಫಿಲಿಫೈನ್ಸ್ ನಲ್ಲಿ ಏಷ್ಯ-ಫೆಸಿಫಿಕ್ ರೀಜನಲ್ ಸ್ಕೌಟ್: ಉಪನ್ಯಾಸಕ ಹರ್ಷದ್ ಗೆ ಬೀಳ್ಕೊಡುಗೆ
ಬಂಟ್ವಾಳ, ಅ. 3: ಫಿಲಿಫೈನ್ಸ್ ನಲ್ಲಿ ನಡೆಯುವ 9ನೆ ಏಷ್ಯ-ಫೆಸಿಫಿಕ್ ರೀಜನಲ್ ಸ್ಕೌಟ್ ಯೂತ್ ಫಾರಂ-1018ಕ್ಕೆ ಕರ್ನಾಟಕದಿಂದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿ ಭಾರತವನ್ನು ಪ್ರತಿನಿಧಿಸುತ್ತಿರುವ ವಿಟ್ಲ ನಿವಾಸಿ, ಪುತ್ತೂರು ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಹರ್ಷದ್ ಇಸ್ಮಾಯಿಲ್ ಅವರನ್ನು ವಿಟ್ಲದ ನಾಗರಿಕರ ಪರವಾಗಿ ಬುಧವಾರ ಬೀಳ್ಕೊಡಲಾಯಿತು.
ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ನಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ. ವಿಟ್ಲ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯದಿಂದ ಏಕೈಕ ಪ್ರತಿನಿಧಿಯಾಗಿ ವಿಟ್ಲದ ಯುವಕ ಭಾಗವಹಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಗ್ರಾಮೀಣ ಭಾಗದ ಹಲವು ಪ್ರತಿಭೆಗಳು ಬೆಳೆಯುತ್ತಿದ್ದು, ಅವರಿಗೆ ಪ್ರೋತ್ಸಾಹ ನೀಡಿದರೆ ಇನ್ನಷ್ಟ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪಟ್ಟಣ ಪಂಚಾಯತ್ ಸದಸ್ಯ ಮಂಜುನಾಥ ಕಲ್ಲಕಟ್ಟ, ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ, ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಹಾನೆಸ್ಟ್, ಎಸ್ಡಿಪಿಐ ಮುಖಂಡರಾದ ಕಲಂದರ್ ಪರ್ತಿಪ್ಪಾಡಿ, ಶಾಕೀರ್ ಅಳಕೆಮಜಲು, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿಕೆಎಂ ಅಶ್ರಫ್, ಜೆಡಿಎಸ್ ಮುಖಂಡ ವಿ.ಎಸ್ ಇಬ್ರಾಹಿಂ ಒಕ್ಕೆತ್ತೂರು, ಅಬೂಬಕ್ಕರ್ ಅನಿಲಕಟ್ಟೆ, ಉಬೈದ್ ಆತೂರು, ಸದಾನಂದ ಗೌಡ ಸೇರಾಜೆ, ಮೊದಲಾದವರು ಉಪಸ್ಥಿತರಿದ್ದರು.