ಎಸ್.ಕೆ.ಎಸ್.ಎಂ. ಅಧ್ಯಕ್ಷರಾಗಿ ಬಶೀರ್ ಅಹ್ಮದ್ ಶಾಲಿಮಾರ್ ಆಯ್ಕೆ
ಮಂಗಳೂರು, ಅ. 3: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ನ ಕೇಂದ್ರ ಸಮಿತಿಯ ಮಹಾಸಭೆ ಕುದ್ರೋಳಿ ಸಲಫಿ ಮಸೀದಿಯ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಯು.ಎನ್. ಅಬ್ದುಲ್ ರಝಾಕ್ ಅಧ್ಯಕ್ಷತೆಯಲ್ಲಿ ಜರಗಿತು.
ಉಳ್ಳಾಲದ ಇಸ್ಲಾಹಿ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಯು.ಎ. ಕಾಸಿಮ್ ಮುಖ್ಯ ಅತಿಥಿಗಳಾಗಿದ್ದರು.
ಎಸ್.ಕೆ.ಎಸ್.ಎಂ.ನ ಕೇಂದ್ರ ಸಮಿತಿಯ ಮುಂದಿನ ಮೂರು ವರ್ಷಗಳ ಆಡಳಿತ ಮಂಡಳಿಗೆ ಗೌರವಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಬಾಷ ಉಳ್ಳಾಲ, ಅಧ್ಯಕ್ಷರಾಗಿ ಬಶೀರ್ ಅಹ್ಮದ್ ಶಾಲಿಮಾರ್, ಉಪಾಧ್ಯಕ್ಷರುಗಳಾಗಿ ನಝೀರ್ ಅಹ್ಮದ್ ಸುರಲ್ಪಾಡಿ, ಎಸ್.ಎ. ಹಸನಬ್ಬ ಸಚ್ಚರಿಪೇಟೆ, ಬಾಷ ಹಸನ್ ಕಂಕನಾಡಿ, ರಿಯಾಝ್ ಅಹ್ಮದ್ ಕಂಕನಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಅಬ್ದುಲ್ ರಹ್ಮಾನ್ ಉಪ್ಪಿನಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಸಯ್ಯದ್ ಬಾವ ಫರಂಗಿಪೇಟೆ, ಮುಹಮ್ಮದ್ ಅಶ್ರಫ್ ಕುದ್ರೋಳಿ, ಅಹ್ಮದ್ ಕುಂಞಿ ಮಾಸ್ಟರ್, ಅಬ್ದುಲ್ ಲತೀಫ್ ಕುದ್ರೋಳಿ, ಕೋಶಾಧಿಕಾರಿಯಾಗಿ ಜಿ. ಅಬ್ದುಲ್ ರಝಾಕ್ ಗೋಳ್ತಮಜಲ್, ದಾವಾ ಕಾರ್ಯದರ್ಶಿಯಾಗಿ ಎಂ.ಜಿ. ಮುಹಮ್ಮದ್ ಕಂಕನಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್ ಸೂರಲ್ಪಾಡಿ, ಬಿ.ಎಸ್. ಇಮ್ತಿಯಾಝ್ ಬಂದರ್ ಇವರು ಆಯ್ಕೆಯಾಗಿದ್ದಾರೆ.
ಆರಂಭದಲ್ಲಿ ಬಶೀರ್ ಅಹ್ಮದ್ ಶಾಲಿಮಾರ್ ಸ್ವಾಗತಿಸಿದರು. ಮುಹಮ್ಮದ್ ಅನೀಸ್ ಕುರ್ ಆನ್ ಪಠಿಸಿದರು. ಕೆ. ಅಬ್ದುಲ್ ರಹ್ಮಾನ್ ಉಪ್ಪಿನಂಗಡಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಎಂ.ಜಿ. ಮುಹಮ್ಮದ್ ವಂದಿಸಿದರು.