ಸೂರಲ್ಪಾಡಿ ಬಸ್ ಏಜೆಂಟ್ ಕೊಲೆಯತ್ನ ಪ್ರಕರಣ: ಮೂವರು ಸೆರೆ
ಮಂಗಳೂರು, ಅ.3: ಗುರುಪುರ ಸೂರಲ್ಪಾಡಿ ಬಸ್ ಏಜೆಂಟ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಅಮ್ಮುಂಜೆ ನಿವಾಸಿ ಶರೀಫ್ (24), ಬಜ್ಪೆಯ ಕಂದಾವರ ನಿವಾಸಿಗಳಾದ ಶಿಫಾಝ್ (21), ಆರಿಫ್ (28) ಬಂಧಿತ ಆರೋಪಿಗಳು.
ಪ್ರಕರಣ: ಸೆ. 24ರಂದು ನಗರದ ಹೊರವಲಯ ಬಜ್ಪೆ ಕೈಕಂಬ ನಿವಾಸಿ ಹರೀಶ್ ಶೆಟ್ಟಿ ಎಂಬವರು ಕೈಕಂಬದಿಂದ ತನ್ನ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುತಿದ್ದದ್ದು, ಈ ವೇಳೆ ಸೂರಲ್ಪಾಡಿ ಬಳಿಯಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಹರೀಶ್ ಶೆಟ್ಟಿ ಅವರಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆ ಕಾರ್ಯಕ್ಕೆ ಮೂರು ತಂಡಗಳನ್ನು ರಚಿಸಲಾಗಿತ್ತು. ಇದರಲ್ಲಿ ಬಜ್ಪೆ ಪೊಲೀಸರು, ಮಂಗಳೂರು ಸಿಸಿಬಿ ಮತ್ತು ಮಂಗಳೂರು ನಗರ ಉತ್ತರ ಉಪವಿಭಾಗ ಪಣಂಬೂರು ರೌಡಿ ನಿಗ್ರಹ ದಳದವರು ಆರೋಪಿಗಳ ಪತ್ತೆಗೆ ಶ್ರಮಿಸಿದ್ದಾರೆ.
Next Story