ಡಿವೈಎಫ್ಐ ಕಾರ್ಯಕರ್ತರಿಗೆ ಪೊಲೀಸ್ ದೌರ್ಜನ್ಯ : ಯಾದವ ಶೆಟ್ಟಿ ಖಂಡನೆ
ಮೂಡುಬಿದಿರೆ, ಅ. 4 : ಡಿವೈಎಫ್ಐ ಕಾರ್ಯಕರ್ತರಾದ ರಿಯಾಝ್ ಮತ್ತು ಇರ್ಷಾದ್ ರಿಗೆ ವೇಣೂರು ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಪ್ರಕರಣವನ್ನು ಸಿಪಿಐಎಂನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಯಾದವ ಶೆಟ್ಟಿ ಖಂಡಿಸಿದ್ದಾರೆ.
ರಿಯಾಝ್ ಮತ್ತು ಇರ್ಷಾದ್ ಅವರು ರಾತ್ರಿ ಮೂಡುಬಿದಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಬೈಕ್ನಲ್ಲಿ ಪ್ರಯಾಣಿಸುತ್ತಿರುವಾಗ ವೇಣೂರಿನಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಇವರಿಬ್ಬರನ್ನು ತಡೆದು ದಾಖಲೆ ಪತ್ರ ಪರಿಶೀಲಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಚಾಲನಾ ಪರವಾನಿಗೆ ನೀಡಿದ್ದು ಉಳಿದ ದಾಖಲೆಗಳು ಮನೆಯಲ್ಲಿರುವುದಾಗಿ ರಿಯಾಝ್ ತಿಳಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಪೊಲೀಸರು ಧರ್ಮ ನಿಂದನೆಗೈದು ಕಳ್ಳತನದ ಆರೋಪ ಹೊರಿಸಿ ಇಬ್ಬರನ್ನೂ ಠಾಣೆಗೆ ಕರೆದೊಯ್ದು ಸಾಮೂಹಿಕವಾಗಿ ಹಲ್ಲೆ ನಡೆಸಿದ್ದಾರೆಂದು ಶೆಟ್ಟಿ ಅವರು ಹೇಳಿಕೆಯಲ್ಲಿ ಖಂಡಿಸಿದ್ದಾರೆ.
Next Story