ಉಡುಪಿ ಜಿಲ್ಲೆಯ ಜೀವ ವೈವಿದ್ಯತೆ ಸಂರಕ್ಷಿಸಿ, ಬೆಳೆಸಿ: ದಿನಕರ ಬಾಬು
ಉಡುಪಿ, ಅ.4: ಜಿಲ್ಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜೀವ ವೈವಿದ್ಯತೆ ಇದೆ. ರಾಜ್ಯದ ಇತರೆ ಯಾವುದೇ ಬಾಗದಲ್ಲಿ ಇರದ ಹಲವು ಅಪರೂಪದ ಜೀವ ವೈವಿದ್ಯತೆ ಜಿಲ್ಲೆಯಲ್ಲಿದೆ. ಇವುಗಳನ್ನು ಗುರುತಿಸಿ, ಬೆಳೆಸಿ, ಸಂರಕ್ಷಿಸುವುದು ಅತ್ಯಂತ ಅಗತ್ಯ ಎಂದು ಉಡುಪಿ ಜಿಪಂ ದಿನಕರ ಬಾಬು ಹೇಳಿದ್ದಾರೆ.
ಗುರುವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಜೀವವೈವಿದ್ಯ ನಿರ್ವಹಣಾ ಸಮಿತಿ ಉಡುಪಿ, ಜಿಪಂ ಹಾಗೂ ಕರ್ನಾಟಕ ಜೀವ ವೈವಿದ್ಯ ಮಂಡಳಿ ಸಹಯೋಗದಲ್ಲಿ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಮತ್ತು ಕರಾವಳಿ ತೀರದ ಗ್ರಾಮ ಪಂಚಾಯತ್ಗಳ ಜನಪ್ರತಿನಿಧಿಗಳು ಮತ್ತು ಪಿಡಿಓಗಳಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಜೀವ ವೈವಿದ್ಯ ನಿರ್ವಹಣೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯ ಹಲವು ಗ್ರಾಪಂ ವ್ಯಾಪ್ತಿಯ ಕಾಡುಗಳಲ್ಲಿ, ಗ್ರಾಮಗಳಲ್ಲಿ, ನಾಗಬನಗಳಲ್ಲಿ, ಕರಾವಳಿ ಪ್ರದೇಶದ ಅಪರೂಪದ ಗಿಡ, ಮರ, ಬಳ್ಳಿ, ಪ್ರಾಣಿಗಳ ಜೀವ ವೈವಿದ್ಯತೆ ಇವೆ. ಈ ವೈವಿದ್ಯತೆಯನ್ನು ವೈಜ್ಞಾನಿಕವಾಗಿ ದಾಖಲಿಸುವುದು ಆಯಾ ಗ್ರಾಪಂಗಳ ಜವಾಬ್ದಾರಿ ಎಂದವರು ತಿಳಿಸಿದರು.
ಈ ಜೀವ ವೈವಿದ್ಯತೆಯನ್ನು ಉಳಿಸಿ, ಬೆಳೆಸಲು ಎಲ್ಲಾ ಗ್ರಾಪಂಗಳಿಗೆ 14ನೇ ಹಣಕಾಸು ಯೋಜನೆಯಲ್ಲಿ ಶೇ.5ರಷ್ಟು ಅನುದಾನ ಮೀಸಲಿಡಲಾಗಿದೆ. ಎಲ್ಲಾ ಗ್ರಾಪಂಗಳು ಈ ಅನುದಾನ ವನ್ನು ಕಡ್ಡಾಯವಾಗಿ ಬಳಸಿಕೊಂಡು ಸ್ಥಳೀಯ ಜೀವ ವೈವಿದ್ಯತೆಯನ್ನು ಬೆಳೆಸಿ, ಸಂರಕ್ಷಿಸಬೇಕು. ಮತ್ತು ತಮ್ಮ ಗ್ರಾಪಂ ಆವರಣ ದಲ್ಲಿ, ತಮ್ಮ ಗ್ರಾಮದಲ್ಲಿರುವ ಜೀವೈವಿದ್ಯತೆಯ ಗಿಡಗಳನ್ನು ಬೆಳಸಿ ಸಸ್ಯೋದ್ಯಾನ ನಿರ್ಮಿಸಿ ಸ್ಥಳೀಯ ಜನತೆಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಜೀವ ವೈವಿದ್ಯತೆಯನ್ನು ಉಳಿಸಿ, ಬೆಳೆಸಲು ಎಲ್ಲಾ ಗ್ರಾಪಂಗಳಿಗೆ 14ನೇ ಹಣಕಾಸು ಯೋಜನೆಯಲ್ಲಿ ಶೇ.5ರಷ್ಟು ಅನುದಾನ ಮೀಸಲಿಡಲಾಗಿದೆ. ಎಲ್ಲಾ ಗ್ರಾಪಂಗಳು ಈ ಅನುದಾನ ವನ್ನು ಕಡ್ಡಾಯವಾಗಿ ಬಳಸಿಕೊಂಡು ಸ್ಥಳೀಯ ಜೀವ ವೈವಿದ್ಯತೆಯನ್ನು ಬೆಳೆಸಿ, ಸಂರಕ್ಷಿಸಬೇಕು. ಮತ್ತು ತಮ್ಮ ಗ್ರಾಪಂ ಆವರಣ ದಲ್ಲಿ, ತಮ್ಮ ಗ್ರಾಮದಲ್ಲಿರುವ ಜೀವೈವಿದ್ಯತೆಯ ಗಿಡಗಳನ್ನು ಬೆಳಸಿ ಸಸ್ಯೋದ್ಯಾನ ನಿರ್ಮಿಸಿ ಸ್ಥಳೀಯ ಜನತೆಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಜೀವ ವೈವಿದ್ಯತೆ ಸಂರಕ್ಷಣೆ ಕುರಿತ ಕಾನೂನಿನ ಬಗ್ಗೆ, ಮೈಸೂರಿನ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುಚ್ಚಯ್ಯ ಮಾತನಾಡಿ, ಜೀವ ವೈವಿದ್ಯತೆ ಕುರಿತು ರಚಿಸಲಾಗಿರುವ ಕಾನೂನು ಉಲ್ಲಂಘಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಜೈಲು ಶಿಕ್ಷೆ, ದಂಡ ಮತ್ತು ಜೈಲು ಶಿಕ್ಷೆಯೊಂದಿಗೆ ದಂಡ ಕಾದಿದೆ. ಹಾಗೂ ನಿರಂತರ ಉಲ್ಲಂಘನೆ ಮಾಡುವವರಿಗೆ ದಿನಕ್ಕೆ 2 ಲಕ್ಷ ರೂ.ನಂತೆ ದಂಡ, ಜಾಮೀನು ರಹಿತ ಪ್ರಕರಣ ದಾಖಲಿಸುವ ಅವಕಾಶ ಇದೆ. ಜೀವ ವೈವಿದ್ಯತೆ ಬೆಳೆಸಿ ಕಾಪಾಡಿದರೆ ಪ್ರಾಕೃತಿಕ ಸಮತೋಲನ ಸಾದ್ಯ ಇಲ್ಲವಾದಲ್ಲಿ ಮನುಷ್ಯನಿಗೆ ಉಳಿಗಾಲವಿಲ್ಲ ಎಂದರು.
ಕರಾವಳಿ ತೀರದಲ್ಲಿ ಕಾಂಡ್ಲಾ ವನಗಳನ್ನು ಬೆಳೆಸಿ, ಸಂರಕ್ಷಿಸುವುದು ಅತ್ಯಂತ ಅಗತ್ಯ. ರಾಷ್ಟಮಟ್ಟದಲ್ಲಿ ರಾಷ್ಟ್ರೀಯ ಜೀವವೈವಿದ್ಯ ಅಭಿವೃದ್ದಿ ಪ್ರಾಧಿಕಾರ, ರಾಜ್ಯಮಟ್ಟದಲ್ಲಿ ರಾಜ್ಯ ಜೀವ ವೈವಿದ್ಯ ಅಭಿವೃದ್ದಿ ಮಂಡಳಿ ಮತ್ತು ಗ್ರಾಮ ಮಟ್ಟದಲ್ಲಿ ಸಹ ಜೀವ ವೈವಿದ್ಯತೆ ಸಂರಕ್ಷಣೆ, ಅಭಿವೃಧ್ದಿಗೆ ಅಗತ್ಯ ಕಾನೂನುಗಳನ್ನು ರಚಿಸಿದ್ದು, ಇವುಗಳನ್ನು ಉಲ್ಲಂಘಿಸುವವರ ವಿರುದ್ದ ಪ್ರಕರಣ ದಾಖಲಿಸಲು ಅವಕಾಶವಿದೆ. ಅಧಿಕಾರಿಗಳು ಈ ಕಾನೂನಿನ ಬಗ್ಗೆ ಸೂಕ್ತ ಅರಿವನ್ನು ಹೊಂದಿರ ಬೇಕು ಎಂದು ಹೇಳಿದರು.
ಜೇನು ನೊಣಗಳನ್ನು ಉಳಿಸಿ: ಜೀವ ವೈವಿದ್ಯತೆ ಕುರಿತು ಮಾತನಾಡಿದ ಜೀವ ವೈವಿದ್ಯ ಮಂಡಳಿಯ ಸದಸ್ಯ ಹಾಗೂ ಖ್ಯಾತ ಪರಿಸರ ತಜ್ಞ ಡಾ.ಎನ್.ಎ.ಮಧ್ಯಸ್ಥ, ಪಶ್ಚಿಮ ಘಟ್ಟದ ಎಲ್ಲಾ ಸಸ್ಯಗಳು ಔಷಧೀಯ ಗುಣ ಹೊಂದಿವೆ. ವಿಶ್ವದಲ್ಲಿ ಶೇ.80ರಷ್ಟು ಸಸ್ಯಗಳ ಬೆಳವಣಿಗೆಗೆ ಜೇನು ನೊಣಗಳು ಕಾರಣ. ಆದರೆ ಪಶ್ಚಿಮ ಘಟ್ಟದಲ್ಲಿ ಅವೈಜ್ಞಾನಿಕವಾಗಿ ಜೇನು ತೆಗೆಯುತ್ತಿರುವ ಕಾರಣ ಜೇನುನೊಣಗಳ ಸಂತತಿ ಕಡಿಮೆಯಾಗುತ್ತಿದ್ದು, ಇದು ಜೀವ ವೈವಿದ್ಯತೆಯ ಉಳಿವಿಗೆ ಮಾರಕವಾಗಲಿದೆ ಎಂದು ಎಚ್ಚರಿಸಿದರು.
ಜೀವವೈವಿದ್ಯತೆ ಗುರುತಿಸಿದ ನಂತರ ಅದನ್ನು ವೈಜ್ಞಾನಿಕವಾಗಿ ದಾಖಲಿಸು ವುದು ಅತ್ಯಂತ ಅಗತ್ಯ. ಇಲ್ಲವಾದಲ್ಲಿ ಇತರೆ ದೇಶದವರು ಅದರ ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಆದ್ದರಿಂದ ಗ್ರಾಮ ಮಟ್ಟದಲ್ಲಿರುವ ಅಪರೂಪದ ಜೀವ ವೈವಿದ್ಯತೆಯನ್ನು ಬೆಳೆಸಿ, ಸಂರಕ್ಷಿಸಿ ಅದನ್ನು ವೌಲ್ಯವರ್ಧನೆ ಮಾಡಿ. ಅದರ ಪ್ರಯೋಜನವನ್ನು ಸ್ಥಳೀಯ ಜನರಿಗೆ ಸಿಗುವಂತೆ ಮಾಡಬೇಕು. ಅಪರೂಪದ ಔಷಧಿಗಿಡಗಳ ಬಗ್ಗೆ ಸ್ಥಳೀಯರಲ್ಲಿರುವ ಜ್ಞಾನದ ಪ್ರಯೋಜನ ವನ್ನು ಇತರರಿಗೂ ನೀಡಬೇಕು. ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕು. ಜೀವ ವೈವಿದ್ಯತೆ ನಮ್ಮ ಆಸ್ತಿ, ಅದನ್ನು ಬೆಳೆಸಿ ಮುಂದಿನ ಪೀಳಿಗೆಗೆ ಅದರ ಪ್ರಯೋಜನ ದೊರೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.
ಕುಂದಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಬಾಕರನ್, ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.