ಕೊಡ್ಲಾಡಿ: ದೇವಸ್ಥಾನದಲ್ಲಿ ಕಳ್ಳತನ
ಶಂಕರನಾರಾಯಣ, ಅ.4: ನಿನ್ನೆ ರಾತ್ರಿ 11:40ರಿಂದ ಇಂದು ಬೆಳಗ್ಗೆ 7:00 ಗಂಟೆ ನಡುವಿನ ಅವಧಿಯಲ್ಲಿ ಕೊಡ್ಲಾಡಿ ಗ್ರಾಮದ ನೀರಾವಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ್ಯದ್ವಾರದ ಬೀಗ ಮುರಿದ ಕಳ್ಳರು ದೇವಸ್ಥಾನದ ಗರ್ಭಗುಡಿಯಲ್ಲಿದ್ದ ಬೆಳ್ಳಿಯ ಮುಖವಾಡ ಹಾಗೂ ಚಿನ್ನದ ತಾಳಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಕಳವಾದ ಸೊತ್ತುಗಳ ಮೌಲ್ಯ 24,500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story