ಮಂಗಳೂರು: 500ಕ್ಕೂ ಅಧಿಕ ರೋಗಿಗಳಿಗೆ ಆರ್ಥಿಕ ನೆರವು
ಮಂಗಳೂರು, ಅ.4: ನಗರದ ಅತ್ತಾವರ ಕೆಎಂಸಿ, ಸರಕಾರಿ ವೆನ್ಲಾಕ್ ಆಸ್ಪತ್ರೆ ಮತ್ತು ಾದರ್ ಮುಲ್ಲರ್ ಆಸ್ಪತ್ರೆಯ ಕ್ಯಾನ್ಸರ್ ಹಾಗು ಕಿಡ್ನಿ ವೈಲ್ಯದಿಂದ ಬಳಲುತ್ತಿರುವ 589 ರೋಗಿಗಳಿಗೆ ನಾಡೋಜ ಡಾ.ಜಿ.ಶಂಕರ್ ತನ್ನ ಹುಟ್ಟುಹಬ್ಬದ ಅಂಗವಾಗಿ ಗುರುವಾರ ಆರ್ಥಿಕ ಸಹಾಯ ವಿತರಿಸಿದರು.
ಕೆಎಂಸಿಯಲ್ಲಿ ಕ್ಯಾನ್ಸರ್ ಪೀಡಿತ 303 ಮತ್ತು ಕಿಡ್ನಿ ವೈಲ್ಯದ 73, ವೆನ್ಲಾಕ್ನಲ್ಲಿ ಕ್ಯಾನ್ಸರ್ನ 42 ಮತ್ತು ಕಿಡ್ನಿಯ 14, ಾದರ್ ಮುಲ್ಲರ್ನಲ್ಲಿ ಕ್ಯಾನ್ಸರ್ನ 62 ಮತ್ತು ಕಿಡ್ನಿ ವೈಲ್ಯದ 95 ಮಂದಿಗೆ ಜಿ. ಶಂಕರ್ ಚೆಕ್ ವಿತರಿಸಿದರು. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ತಲಾ 30 ಸಾವಿರ ರೂ., ಹಿರಿಯರಿಗೆ ತಲಾ 20 ಸಾವಿರ ರೂ. ಮತ್ತು ಕಿಡ್ನಿ ವೈಲ್ಯಗೊಂಡವರಿಗೆ ತಲಾ 15 ಸಾವಿರ ರೂ. ನೀಡಲಾಯಿತು.ಸರಕಾರಿ ವೆನ್ಲಾಕ್ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಕ್ ವಿತರಿಸಿ ಮಾತನಾಡಿದ ಜಿ.ಶಂಕರ್ ‘ಇದು ಆಡಂಬರ ಅಲ್ಲ, ಬಡವರ ಕಷ್ಟದ ಅರಿವು ಇರುವುದರಿಂದ ಬೆವರು ಸುರಿಸಿ ದುಡಿದ ಹಣವನ್ನು ಕೊಡುತ್ತಿದ್ದೇನೆ. ಬಡವರಿಗೆ ಸೇವೆ ನೀಡುವಾಗ ಆಸ್ಪತ್ರೆಯವರು ನಿರ್ಲಕ್ಷ್ಯ ಮಾಡಬಾರದು. ಕಳೆದ ವರ್ಷ 28 ರೋಗಿಗಳಿಗೆ ಚೆಕ್ ತಲುಪಿಸದೆ ಹಿಂದೆ ಕಳುಹಿಸಿರುವುದರಿಮದ ಮತ್ತು ಈ ಬಾರಿ ಪಟ್ಟಿ ಕೊಡಲು ವಿಳಂಬ ಮಾಡಿದ್ದರಿಂದ ನನಗೆ ತೀವ್ರ ನೋವಾಗಿದೆ’ಎಂದರು.
ಬಡ ರೋಗಿಗಳ ಬಗ್ಗೆ ಕಾಳಜಿ ವಹಿಸಿರಿ. ನೀವು ಒಳ್ಳೆಯ ಸೇವೆ ಕೊಟ್ಟರೆ ನಿಮ್ಮ ಮಕ್ಕಳಿಗೆ ಒಳಿತಾಗುತ್ತದೆ. ಆಸ್ಪತ್ರೆಯಲ್ಲಿ ಪೇಲ್ಯೇಟಿವ್ ಕೇರ್ ಸ್ಥಾಪನೆಗೆ ಆರೋಗ್ಯ ಸಚಿವರು ಮತ್ತು ಉಸ್ತುವಾರಿ ಸಚಿವರಿಗೆ ಮನವಿ ಮಾಡುತ್ತೇನೆ. ಅಲ್ಲದೆ ನನ್ನ ಸಹಾಯವನ್ನೂ ನೀಡುತ್ತೇನೆ. ಇಂಥ ಕೇಂದ್ರ ಸ್ಥಾಪಿಸಿದರೆ ಸಾಲದು. ಅದರ ಸೂಕ್ತ ನಿರ್ವಹಣೆ, ಉತ್ತಮ ಸೇವೆ ಕೊಡಲು ಸಮಿತಿ ರಚಿಸಬೇಕಿದೆ ಎಂದು ಡಾ.ಜಿ.ಶಂಕರ್ ಸಲಹೆ ನೀಡಿದರು.
ಜಿ. ಶಂಕರ್ ಟ್ರಸ್ಟ್ನ ಟ್ರಸ್ಟಿ ನವೀನ್ ಎ., ವೆನ್ಲಾಕ್ ಆಸ್ಪತ್ರೆಯ ಜಂಟಿ ನಿರ್ದೇಶಕಿ ಡಾ.ದಮಯಂತಿ ಕೃಷ್ಣ ಮೋಹನ್, ಸ್ಥಾನೀಯ ವೈದ್ಯಾಧಿಕಾರಿ ಡಾ.ಜ್ಯೂಲಿಯನ್ ಸಲ್ದಾನ ಉಪಸ್ಥಿತರಿದ್ದರು.
ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿದೇವಿ ಎಚ್.ಆರ್. ಸ್ವಾಗತಿಸಿದರು. ಸಿಬ್ಬಂದಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.