ಮಂಗಳೂರು: ಮೀನುಗಾರ ನಾಪತ್ತೆ
ಮಂಗಳೂರು, ಅ.4: ನಗರದಲ್ಲಿ ಮೀನುಗಾರಿಕೆ ಕೆಲಸಕ್ಕೆ ಬಂದ ಆಂಧ್ರದ ಮಾರುಪಿಲ್ಲಿ ಯೆರ್ರಯ್ಯ (42) ಎಂಬವರು ನಾಪತ್ತೆಯಾಗಿದ್ದಾರೆ.
ಮಾರುಪಿಲ್ಲಿ ಯೆರ್ರಯ್ಯ ಆಂಧ್ರದಲ್ಲಿ ಮೀನು ಹಿಡಿಯುವ ಕೆಲಸ ಮಾಡಿಕೊಂಡಿದ್ದವರು.
ಸುಮಾರು 20 ದಿನಗಳ ಹಿಂದೆ ಜಂಪಯ್ಯ ಎಂಬವರೊಂದಿಗೆ ಮಂಗಳೂರಿಗೆ ಬಂದಿದ್ದರು. ಸೆ.29ರಂದು ರಾತ್ರಿ 8:30ರ ವೇಳೆಗೆ ಜಂಪಯ್ಯ ಎಂಬವರು ಯೆರ್ರಯ್ಯರ ಅಳಿಯನಿಗೆ ಕರೆ ಮಾಡಿ, ಸೆ.28ರಂದು ನಾವಿಬ್ಬರು ಮೀನುಗಾರಿಕೆಗೆ ಹೋದವರು, ಸೆ.29ರಂದು ಬೆಳಗ್ಗೆ 4 ಗಂಟೆಗೆ ವಾಪಸ್ ಬಂದಿದ್ದೇವೆ. ನಂತರ ಬೋಟಿನಿಂದ ಹೊರಗೆ ಹೋದ ಯೆರ್ರಯ್ಯ ರಾತ್ರಿಯಾದರೂ ವಾಪಸ್ ಬರಲಿಲ್ಲ ಎಂದು ಹೇಳಿದ್ದಾರೆ.
ಯೆರ್ರಯ್ಯ ನಾಪತ್ತೆಯಾದ ಬಳಿಕ ಸಂಬಂಧಿಕರು, ಮನೆಯವರ ಬಳಿ ಮಾಹಿತಿ ಕೇಳಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಈ ಕಾರಣದಿಂದ ನಗರದ ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಚಹರೆ: 5.2 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ತೆಲುಗು ಭಾಷೆ ಮಾತನಾಡುತ್ತಾರೆ. ನೀಲಿ ಬಣ್ಣದ ಮುಕ್ಕಾಲು ಪ್ಯಾಂಟ್, ಬೂದುಬಣ್ಣದ ಟೀ-ಶರ್ಟ್ ಧರಿಸಿದ್ದಾರೆ. ಎದೆ ಭಾಗದಲ್ಲಿ ಮಾರುಪಿಲ್ಲಿ ನಚ್ಚಿಮ್ಮಮ್ಮ ಎಂಬ ಹಚ್ಚೆ ಗುರುತಿದೆ. ಎಡೆ ಎಡಭಾಗದಲ್ಲಿ ಮಾರುಪಿಲ್ಲಿ ಅಪ್ಪಣ್ಣ ಎಂಬುದಾಗಿ ತೆಲುಗಿನಲ್ಲಿ ಹೆಚ್ಚೆ ಗುರುತಿದೆ. ಮಾಹಿತಿ ಸಿಕ್ಕವರು ಪಾಂಡೇಶ್ವರ ಠಾಣೆ(0824-2220518)ಗೆ ತಿಳಿಸಲು ಪೊಲೀಸ್ ಪ್ರಕಟಣೆ ತಿಳಿಸಿದೆ.