ಮಂಗಳೂರು: ಚುನಾವಣಾ ಆಯೋಗದ ನಿಲುವು ಖಂಡಿಸಿ ಬೂತ್ ಮಟ್ಟದ ಅಧಿಕಾರಿಗಳ ಧರಣಿ
ಮಂಗಳೂರು, ಅ. 5: ಚುನಾವಣೆ ಸಂದರ್ಭ ಬೂತ್ ಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರ ಪ್ರಯಾಣ ಭತ್ತೆ, ದಿನಭತ್ತೆ ಇತ್ಯಾದಿ ಯಾವುದನ್ನೂ ನೀಡದ ಚುನಾವಣಾ ಆಯೋಗದ ನಿಲುವನ್ನು ಖಂಡಿಸಿ ಕಾರ್ಯಕರ್ತೆಯರು ಶುಕ್ರವಾರ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದರು.
ಈ ಸಂದರ್ಭ ಸಂಘದ ನಾಯಕಿಯರಾದ ಲತಾ ಸುಳ್ಯ, ಜಯಲಕ್ಷ್ಮಿ ಬಿ.ಆರ್., ಆಶಾಲತಾ, ಚಂದ್ರಾವತಿ, ವಿಜಯಲಕ್ಷ್ಮಿ ಮತ್ತಿತರರು ಪಾಲ್ಗೊಂಡಿದ್ದರು.
Next Story