ಮಂಗಳಮುಖಿಯರಿಗೆ ಸಮಾಜದಿಂದ ನೈತಿಕ ಬೆಂಬಲ: ಕಾಜಲ್
ಉಡುಪಿ, ಅ.5: ಪ್ರಸ್ತುತ ಸಮಾಜದಲ್ಲಿ ಮಂಗಳಮುಖಿಯರನ್ನು ಸಮಾನ ರಾಗಿ ನೋಡುವ ದೃಷ್ಠಿಕೋನ ಬೆಳೆದು ಬಂದಿರುವುದು ನಮಗೆ ನೈತಿಕ ಬೆಂಬಲ ಸಿಕ್ಕಿದಂತಾಗಿದೆ. ಹಿಂದೆ ನಮ್ಮ ಸಮುದಾಯವನ್ನು ಪ್ರತ್ಯೇಕವಾಗಿ ನೋಡುವ ಮೂಲಕ ನಮ್ಮನ್ನು ಶೋಷಣೆ ಮಾಡಲಾಗುತ್ತಿತ್ತು ಎಂದು ಮಂಗಳಮುಖಿ ಆರ್.ಜೆ.ಕಾಜಲ್ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ವಿದ್ಯಾರ್ಥಿ ದರ್ಬಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ಬೆಳವಣಿಗೆಯಲ್ಲಿ ನಮಗೆ ಎಲ್ಲಾ ಕ್ಷೇತ್ರಗಳಲೂ, ಎಲ್ಲಾ ಕಡೆಗಳಲ್ಲೂ ಪ್ರವೇಶ ದೊರೆಯುತ್ತಿರುವುದು ನಮಗೆ ಅತೀವ ಸಂತೋಷವನ್ನುಂಟು ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳಮುಖಿಯರಾದ ರಮ್ಯ ಹಾಗೂ ಬಿಂದು ಕೂಡ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಸಂವಾದ ಕಾರ್ಯಕ್ರಮವನ್ನು ಸಮಾಜ ಕಾರ್ಯ ವಿಬಾಗದ ಅಧ್ಯಾಪಕಿ ಅಧ್ಯಾಪಕಿ ಅಶ್ವಿತಾ ಶಾಲೆಟ್ ಡಿಸೋಜ ಹಾಗೂ ವಿದ್ಯಾರ್ಥಿಗಳಾದ ನವ್ಯ ನಾಯಕ್, ಸೌಪರ್ಣಿಕಾ ನಡೆಸಿಕೊಟ್ಟರು. ಉಪನ್ಯಾಸಕ ವಿಘ್ನೇಷ್ ಕಾರ್ಯಕ್ರಮ ನಿರೂಪಿಸಿದರು.
Next Story