ಮಾತು ವ್ಯಕ್ತಿತ್ವದ ಪ್ರತಿಬಿಂಬ: ಪ್ರೊ.ಸುರೇಂದ್ರನಾಥ ಶೆಟ್ಟಿ
ಉಡುಪಿ, ಅ.4: ಜಾಗತೀಕರಣ ಯುಗದಲ್ಲಿ ಬದುಕನ್ನು ಎದುರಿಸಲು ಅಂಕ ರ್ಯಾಂಕುಗಳ ಜೊತೆಗೆ ಸಂವಹನ ಕೌಶಲ್ಯ ಮೈಗೂಡಿಸಕೊಳ್ಳಬೇಕಾಗಿದೆ. ನಾವಾಡುವ ಮಾತಿನಿಂದಲೇ ನಮ್ಮ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ. ಹೀಗಾಗಿ ಮಾತು ವ್ಯಕ್ತಿತ್ವದ ಪ್ರತಿಬಿಂಬ ಎಂದು ಉಡುಪಿ ಎಂಜಿಎಂ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ರೇಂಜರಸ್ ಕ್ಲಬ್ ಮತ್ತು ರೋವರ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡುವುದು ಒಂದು ಕಲೆ ಎಂಬ ವಿಷಯದ ಕುರಿತು ಅವರು ಉಪ ನ್ಯಾಸ ನೀಡಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ್ ಮಾತನಾಡಿ, ಮಾತಿನಲ್ಲಿ ಭಾವನೆಗಳು ಸೇರಿದಾಗ ಅದು ಹೃದಯ ಸ್ಪರ್ಶಿ ಮಾತು ಎನಿಸುತ್ತದೆ ಎದು ತಿಳಿಸಿದರು.
ವೇದಿಕೆಯಲ್ಲಿ ರೇಂಜರಸ್ ಕ್ಲಬ್ ಲೀಡರ್ ಪ್ರೊ.ವನಿತಾ ಮಯ್ಯ, ರೋವರ್ಸ್ ಘಟಕದ ಅವಿನಾಶ್ ನೀಲಾವರ ಉಪಸಿತೀತರಿದ್ದರು. ಆಕಾಶ್ ಸ್ವಾಗತಿಸಿ, ಪ್ರಜ್ಞಾ ವಂದಿಸಿದರು. ವಿಕ್ರಮ ಪ್ರಭು ಕಾರ್ಯಕ್ರಮ ನಿರೂಪಿಸಿದರು.