ಔಷಧೀಯ ಸಸ್ಯಗಳ ಮಾಹಿತಿ ವಿನಿಮಯ ಕಾರ್ಯಕ್ರಮ
ಉಡುಪಿ, ಅ.5: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮೂಲಿಕೋದ್ಯಾನ ಘಟಕದ ವತಿಯಿಂದ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಪರಿಸರದಲ್ಲಿ ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಕಹಿಬೇವು, ಮತ್ತಿ, ಕಿರಾತಕಡ್ಡಿ, ಅಮೃತಬಳ್ಳಿ, ನಾಗಕೇಶರ, ಶಾಂತಿಕಾಯಿ, ಹೊಂಗೆ, ಅಶೋಕ, ಪುನರ್ಪುಳಿ, ಸಂದುಬಳ್ಳಿ, ಶಿಂಶಪ ಮುಂತಾದ 30ಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ನೆಟ್ಟು ಅವುಗಳ ನಿರ್ವಹಣೆ, ಪೋಷಣೆಯ ಮಾಹಿತಿಯನ್ನು ವಿವರಿಸಲಾಯಿತು.
ಮೂಲಿಕೋದ್ಯಾನ ಘಟಕದ ಸಂಚಾಲಕಿ ಡಾ.ಸುಮಾ ಮಲ್ಯ ಔಷಧೀಯ ಸಸ್ಯಗಳ ವಿವಿಧ ಭಾಷೆಗಳಲ್ಲಿರುವ ಹೆಸರು, ಪರಿಚಯಾತ್ಮಕ ವಿವರಣೆಯ ಪ್ರತಿಯನ್ನು ಹಸ್ತಾಂತರಿಸಿದರು. ಮೂಲಿಕೋದ್ಯಾನ ಘಟಕದ ಸದಸ್ಯರಾದ ಡಾ. ಮೊಹಮ್ಮದ್ ಪೈಸಲ್, ಡಾ.ನಿವೇದಿತಾ ಶೆಟ್ಟಿ ಮೂಲಿಕಾ ವನ ನಿರ್ಮಾಣದಲ್ಲಿ ಸಹಕರಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಕೃಷ್ಣ ಕೆ., ಡಾ. ಸುನೀಲ್, ಡಾ.ಜ್ಯೋತಿ ಉಪಸ್ಥಿತರಿದ್ದರು. ಆರೋಗ್ಯ ಕೇಂದ್ರ ಆಯುಷ್ ವೈದ್ಯಾಧಿಕಾರಿ ಡಾ.ವೊಹಮ್ಮದ್ ಇರ್ಫಾನ್ ಸಹಕರಿಸಿದರು.