ಕಲೆ, ಸಾಹಿತ್ಯ ಮಾನವನ ಆಂತರ್ಯವನ್ನು ಅರಳಿಸುತ್ತದೆ: ಪ್ರಜ್ಞಾ ಮಾರ್ಪಳ್ಳಿ
ಉಡುಪಿ, ಅ.5: ಉಡುಪಿ ಸರಕಾರಿ ಮಹಿಳಾ ಕಾಲೇಜಿನ ಕನ್ನಡ ಸಂಘದ ವತಿಯಿಂದ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕಿ ಸೌಮ್ಯಲತಾ ಸಂಪಾದಿತ ಉಡುಪಿ ಜಿಲ್ಲಾ ಲೇಖಕಿಯರ ಪರಿಚಯಾತ್ಮಕ ಪುಸ್ತಕ ‘ಮೊದಲ ಹೆಜ್ಜೆ’ಯನ್ನು ಲೇಖಕಿ, ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕಿ ಪ್ರಜ್ಞಾ ಮಾರ್ಪಳ್ಳಿ ಇತ್ತೀಚೆಗೆ ಕಾಲೇಜಿನ ಸ್ನಾತಕ ವಿಭಾಗದ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ದರು.
ಕಲೆ, ಸಾಹಿತ್ಯ ಮಾನವನ ಆಂತರ್ಯವನ್ನು ಅರಳಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು. ಸಕಾರಾತ್ಮಕ ಚಿಂತನೆಗಳು ಮತ್ತು ಅನುಭವಗಳು ಸುಂದರ ಬದುಕಿನ ರಹದಾರಿ ಎಂದು ಪ್ರಜ್ಞಾ ಮಾರ್ಪಳ್ಳಿ ಹೇಳಿದರು.
ಕಾಲೇಜು ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಲಾ ವಿಭಾಗದ ಡೀನ್ ಪ್ರೊ.ಸೋಜನ್ ಕೆ.ಜಿ. ಉಪಸ್ಥಿತರಿದ್ದರು. ಕೃತಿ ಸಂಪಾದಕಿ ಸೌಮ್ಯಲತಾ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ರವಿರಾಜ್ ಶೆಟ್ಟಿ ವಂದಿಸಿದರು. ಕನ್ನಡ ಉಪನ್ಯಾಸಕಿ ತ್ರಿವೇಣಿ ಅಂಡಿಂಜೆ ಕಾರ್ಯಕ್ರಮ ನಿರೂಪಿಸಿದರು.
Next Story