ಮುಂಡ್ಕಿನಜಡ್ಡು: ಕೃಷಿ ಮಾಹಿತಿ, ಗ್ರಾಮಸಮಿತಿ ರಚನೆ
ಉಡುಪಿ, ಅ.5: ಜಿಲ್ಲಾ ಕೃಷಿಕ ಸಂಘ ಬ್ರಹ್ಮಾವರ ವಲಯ ಸಮಿತಿ ಆಯೋಜಿಸಿರುವ ಕೃಷಿ ಮಾಹಿತಿ ಮತ್ತು ಆರೂರು, ಚೇರ್ಕಾಡಿ ಹಾಗೂ ನೀಲಾವರ ಗ್ರಾಮಗಳನ್ನು ಒಳಗೊಂಡ ಕೃಷಿಕ ಸಂಘದ ಗ್ರಾಮ ಸಮಿತಿ ರಚನೆ ಕಾರ್ಯಕ್ರಮ ಮುಂಡ್ಕಿನಜಡ್ಡು ಶಾರದಾ ಪ್ರೌಢಶಾಲೆ ವಠಾರದಲ್ಲಿ ಅ.7ರ ಬೆಳಗ್ಗೆ 10:30ಕ್ಕೆ ನಡೆಯಲಿದೆ.
ಜಿಲ್ಲಾ ಕೃಷಿಕ ಸಂಘದ ಜಿಲ್ಲಾ ಪದಾಧಿಕಾರಿಗಳಾದ ರಾಮಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ ಭಟ್, ದಿನೇಶ್ ಶೆಟ್ಟಿ ಹೆರ್ಗ, ರವೀಂದ್ರ ಪೂಜಾರಿ ಗುಜ್ಜರಬೆಟ್ಟು, ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಮೊದಲಾದವರು ಇದರಲ್ಲಿ ಭಾಗವಹಿಸಲಿದ್ದಾರೆ.
ಕಡಿಮೆ ವೆಚ್ಚದಲ್ಲಿ ವೈಜ್ಞಾನಿಕ- ಲಾಭದಾಯಕ ಕೃಷಿ, ಕೀಟ-ರೋಗ ಬಾಧೆ ನಿರ್ವಹಣೆ ಕುರಿತಂತೆ ಮಾಹಿತಿ-ಮಾರ್ಗದರ್ಶನವನ್ನು ನೀಡಲಾಗುವುದು ಎಂದು ಕೃಷಿಕ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story