ಮಣಿಪಾಲದಲ್ಲಿ ನವರಾತ್ರಿ ‘ಗೊಂಬೆ ಹಬ್ಬ’
ಮಣಿಪಾಲ, ಅ.5: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ರೋಟರಿ ಕ್ಲಬ್ ಉಡುಪಿ-ಮಣಿಪಾಲ ಹಾಗೂ ಮಣಿಪಾಲ ವೊಲೆಂಟೀಯರ್ ಸರ್ವೀಸಸ್ ಆರ್ಗನೈಜೇಷನ್ ಇವರ ಸಹಕಾರದಿಂದ ಕರಾವಳಿಕರ್ನಾಟಕದಲ್ಲಿ ಮೊದಲ ಬಾರಿಗೆ ‘ಗೊಂಬೆ ಹಬ್ಬ’ ಆಚರಿಸಲಾಗುತ್ತಿದೆ.
ಸಾರ್ವಜನಿಕರು ತಮ್ಮ ಬಳಿ ಇರುವ ಯಾವುದೇ ಹಳೆ ಅಥವಾ ಹೊಸ ಗೊಂಬೆ, ಆಟಿಕೆಗಳನ್ನು ದಾನ ಮಾಡಿ ಹಬ್ಬದಲ್ಲಿ ಪಾಲ್ಗೊಳ್ಳಬಹುದಾಗಿದೆ. ನವರಾತ್ರಿಯ ವೇಳೆ ಈ ಗೊಂಬೆಗಳನ್ನು ಪ್ರದರ್ಶನಕ್ಕಿಟ್ಟು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ನಂತರ ಮಣಿಪಾಲ ಹಾಗು ಉಡುಪಿಯ ಸುತ್ತಮುತ್ತ ಇರುವ ಅಂಗನವಾಡಿಗಳಿಗೆ ಹಾಗು ವಿಶೇಷ ಮಕ್ಕಳ ಶಾಲೆಗಳಿಗೆ ನೀಡಲಾಗುವುದು.
ನಿರ್ಜೀವ ವಸ್ತುಗಳಂತೆ ನಿಮ್ಮ ಮನೆಗಳಲ್ಲಿ ಕುಳಿತಿರುವ ಗೊಂಬೆಗಳಿಗೆ ಜೀವ ತುಂಬಿ. ಒಂದು ಮಗುವಿನ ಮೊಗದಲ್ಲಿ ಮುಗುಳ್ನಗೆ ಮೂಡಿಸಲು ಕಾರಣರಾಗಿ, ಮಣಿಪಾಲದಲ್ಲಿ ನಡೆಯುವ ಈ ದಾನ್ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ವಿನಯ್ ರೆಡ್ಡಿ (ದೂರವಾಣಿ:8197210187) ಅಥವಾ ಅಶ್ವಿನ್ ಟಿ (8867105324) ಇವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.