‘ಬಿಲೆ ಕಟ್ಟರೆ ಆವಂದಿನ’ ತುಳು ನಾಟಕದ 50ರ ಸಂಭ್ರಮ
ಮಂಗಳೂರು, ಅ. 5: ಯುಗಪುರುಷದ ಜತೆ ತುಳು ರಂಗಭೂಮಿಯಲ್ಲಿ ವಿಶೇಷ ಸಾಧನಗೈದು ನಾಟಕ ಪ್ರದರ್ಶನದ ಜತೆ ವಿವಿಧ ಆಯಾಮಗಳಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿರುವ ಕಿನ್ನಿಗೋಳಿ ವಿಜಯಾ ಕಲಾವಿದರ ಹರೀಶ್ ಪಡುಬಿದ್ರೆ ರಚನೆಯ ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದ ‘ಬಿಲೆ ಕಟ್ಟರೆ ಆವಂದಿನ’ ತುಳು ನಾಟಕದ 50ರ ಸಂಭ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ನಗರದ ಪುರಭವನದಲ್ಲಿ ಇತ್ತೀಚೆಗೆ ನಡೆಯಿತು.
ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು. ನಾಟಕ ರಚನೆಕಾರ ಹರೀಶ್ ಪಡುಬಿದ್ರಿ ಸಹಿತ ಎಲ್ಲಾ ವಿಜಯಾ ಕಲಾವಿದರನ್ನು ಗೌರವಿಸಲಾಯಿತು.
ಈ ನಾಟಕದ ಪ್ರಥಮ ಪ್ರದರ್ಶನವನ್ನು ಸಂಘಟಿಸಿದ್ದ ಪಕ್ಷಿಕೆರೆ ಪಂಜ ಕೊಕುಡೆಯ ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಉದ್ಯಮಿ ಏಳಿಂಜೆ ಕೋಂಜಾಲುಗುತ್ತು ಅನಿಲ್ ಶೆಟ್ಟಿ ಕಲಾವಿದರನ್ನು ಗೌರವಿಸಿದರು. ಯುಗಪರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಮಾತನಾಡಿದರು.
ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಕೋಶಾಧಿಕಾರಿ ರವೀಂದ್ರನಾಥ ಎಸ್.ಶೆಟ್ಟಿ, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರಾ, ನಿಡ್ಡೋಡಿಯ ಸಮಾಜ ಸೇವಕಿ ಶಾಂಭವಿ ಶೆಟ್ಟಿ, ತುಳುನಾಟಕ ಕಲಾವಿದರ ಒಕ್ಕೂಟದ ಆಧ್ಯಕ್ಷ ಕಿಶೋರ್ ಡಿ.ಶೆಟ್ಟಿ, ಬಜಪೆ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ, ಕಿನ್ನಿಗೋಳಿ ಯಕ್ಷಲಹರಿಯ ಅಧ್ಯಕ್ಷ ಪಿ.ಸತೀಶ್ ರಾವ್, ರಂಗ ಸಂಘಟಕ ವಿ.ಜಿ.ಪಾಲ್, ಕಿನ್ನಿಗೋಳಿಯ ಉದ್ಯಮಿ ಸ್ವರಾಜ್ ಶೆಟ್ಟಿ, ತಂಡದ ಸಂಚಾಲಕ ಸಾಯಿನಾಥ ಶೆಟ್ಟಿ ಮತ್ತಿತರರಿದ್ದರು.
ಅಧ್ಯಕ್ಷ ಶರತ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಲಕ್ಷ್ಮಣ್ ಏಳಿಂಜೆ ಸನ್ಮಾನ ಪತ್ರ ವಾಚಿಸಿದರು. ನಿರ್ವಾಹಕ ಸುಧಾಕರ ಸಾಲ್ಯಾನ್ ವಂದಿಸಿದರು. ಕಲಾವಿದ ನರೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಸಂಚಾರ ಮುಕ್ತ ವಲಯ ನಿರ್ಮಾಣ
ಬಸ್ಬೇಗಳ ಸುತ್ತಮುತ್ತ 50ರಿಂದ 100 ಮೀಟರ್ವರೆಗೆ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶ ನೀಡಬಾರದು. ಬೆಂಗಳೂರಿನಂತಹ ಮಹಾನಗರಗಳಲ್ಲಿ ‘ಸಂಚಾರ ಮುಕ್ತ ವಲಯ’ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳೂರಿನಲ್ಲು ಇದನ್ನು ಜಾರಿಗೆ ತರಬೇಕು. ಬಸ್ಗಳ ಎಂಟ್ರಿ ಮತ್ತು ಎಕ್ಸಿಟ್ ಭಾಗದಲ್ಲಿ ಹಳದಿ ಗೆರೆಗಳನ್ನು (ಯೆಲ್ಲೊ ಲೈನ್) ಹಾಕಿಸಬೇಕು ಎಂದು ಕುಲಶೇಖರದಿಂದ ಕರೆ ಮಾಡಿದ ಅನಿಲ್ ರಾವ್ ಸಲಹೆ ನೀಡಿದರು.
ಸಲಹೆಯನ್ನು ಸ್ವಾಗತಿಸಿದ ಪೊಲೀಸ್ ಆಯುಕ್ತರು, ನಗರದಲ್ಲಿ ‘ಸಂಚಾರ ಮುಕ್ತ ವಲಯ’ ನಿರ್ಮಾಣದ ಸಾಧ್ಯಾಸಾಧ್ಯತೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.