ಮಲ್ಲಾರು ಮಸೀದಿಯಿಂದ ಕೊಡಗು ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಧನಸಹಾಯ
ಕಾಪು, ಅ.6: ಕೊಡಗು ಪ್ರಾಕೃತಿಕ ವಿಕೋಪ ಸಂತ್ರಸ್ತರಿಗಾಗಿ ಮಜೂರು ಮಲ್ಲಾರಿನ ಬದ್ರಿಯಾ ಜುಮಾ ಮಸೀದಿಯುವ ಜಮಾಅತರು ಹಾಗೂ ಇತರರಿಂದ ಸಂಗ್ರಹಿಸಿದ 65,000 ರೂ.ನ್ನು ಇತ್ತೀಚೆಗೆ ನೀಡಲಾಯಿತು.
ಮುಖ್ಯಮಂತ್ರಿ ಪರಿಹಾರ ನಿಧಿಗೆ ನೆರವಿನ ಹಣದ ಡಿ.ಡಿ.ಯನ್ನು ಉಡುಪಿ ಅಪರ ಜಿಲ್ಲಾಧಿಕಾರಿ ಕೆ. ವಿದ್ಯಾ ಕುಮಾರಿ ಮೂಲಕ ಜಮಾಅತ್ನ ಪ್ರಧಾನ ಖತೀಬ್ ಅಬ್ದುರ್ರಶೀದ್ ಸಖಾಫಿ, ಅಧ್ಯಕ್ಷ ಎಂ.ಎಚ್.ಅಬ್ದುಲ್ ಹಮೀದ್ ಮಜೂರು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫಾರೂಕ್ ಚಂದ್ರನಗರ ಅವರು ಹಸ್ತಾಂತರಿಸಿದರು.
ಈ ಸಂದರ್ಭ ಜಮಾಅತ್ ಸಮಿತಿಯ ಕಾರ್ಯದಶಿ ಶಂಸುದ್ದೀನ್ ಕರಂದಾಡಿ, ಕೋಶಾಧಿಕಾರಿ ಪಿ.ಎಂ.ಇಬ್ರಾಹೀಂ ಪಾದೂರು, ಉಪಾಧ್ಯಕ್ಷ ಅಬ್ದುರ್ರಝಾಕ್ ಕೊಪ್ಪಲ್ ತೋಟ, ಸದಸ್ಯರಾದ ಉಮರ್ ಪೊಲಿಪು, ಶೇಕತ್ತಾಲಿ ಬಾವ, ಅಬ್ದುಲ್ ಅಝೀಝ್ ಮಜೂರು, ಫೈಝಲ್ ಮಜೂರು, ಇಸ್ಮಾಯೀಲ್ ಎಂ.ಎಂ.ಎಸ್., ಅಶ್ರಫ್ ಮಜೂರು, ಸಾದಿಕ್ ಕೆ.ಪಿ. ಮಲ್ಲೂರು, ಶರ್ಫುದ್ದೀನ್ ಕೊಂಬಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
Next Story