ಬ್ರಹ್ಮರಕೂಟ್ಲು ಟೋಲ್ಗೇಟ್ನಲ್ಲಿ ಹೆಚ್ಚುತ್ತಿದೆ ಗೂಂಡಾಗಿರಿ: ಎಸ್ಡಿಪಿಐ
ಬಂಟ್ವಾಳ, ಅ. 6: ಇತ್ತೀಚಿನ ದಿನಗಳಲ್ಲಿ ಬಿ.ಸಿ.ರೋಡಿನ ಬ್ರಹ್ಮರಕೂಟ್ಲು ಟೋಲ್ಗೇಟ್ನಲ್ಲಿ ಇಲ್ಲಿನ ಸಿಬ್ಬಂದಿ ವಾಹನ ಚಾಲಕರ ಮೇಲೆ ಹಲ್ಲೆ, ನಿಂದನೆ, ಅವಾಚ್ಯ ಪದ ಬಳಕೆಯಂತಹ ದುರ್ವತನೆಗಳನ್ನು ಹೆಚ್ಚುತ್ತಿದೆ ಎಂದು ಎಸ್ ಡಿ ಪಿ ಐ ಆರೋಪಿಸಿದೆ. ಈ ರೀತಿಯ ಗೂಂಡಾ ಪ್ರವರ್ತನೆಯನ್ನು ಎಸ್ಡಿಪಿಐ ಬಂಟ್ವಾಳ ಪುರಸಭಾ ಸಮಿತಿ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದೆ.
ಈ ಹಿಂದೆ ಸಿಬ್ಬಂದಿಗಳ ದುರ್ವರ್ತನೆ ಪರಿಣಾಮ, ಟೋಲ್ಗೇಟ್ ಮೇಲೆ ದಾಳಿಯಂತಹ ಅಹಿತಕರ ಘಟಣೆಯು ನಡೆದಿದ್ದು, ಈಗ ಮತ್ತೊಂದು ಅಂತಹ ಘಟನೆ ನಡೆಯಲು ಸಿಬ್ಬಂದಿ ಕುಮ್ಮಕ್ಕು ನೀಡಿದಂತಾಗಿದೆ. ಸಮಾಜದ ಶಾಂತಿ ಕದಡುವವರ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತಾ, ಈ ರೀತಿಯ ಗೂಂಡಾ ವರ್ತನೆಯ ವಿರುದ್ಧ ಹಾಗೂ ಅವೈಜ್ಞಾನಿಕ ಟೋಲ್ ಶುಂಕ ಸಂಗ್ರಹದ ವಿರುದ್ಧ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಮುಂದಿನ ಹೋರಾಟಗಳನ್ನು ನಡೆಸಲಾಗುವುದು ಎಂದು ಪುರಸಭಾ ಸಮಿತಿ ಅಧ್ಯಕ್ಷ, ಪುರಸಭಾ ಸದಸ್ಯ ಮುನೀಶ್ ಅಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story