ಶ್ರೀಗೋಕರ್ಣನಾಥ ಕ್ಷೇತ್ರದಿಂದ 10ಸಾವಿರ ಮಂದಿಗೆ ಆರೋಗ್ಯಕಾರ್ಡ್ ಯೋಜನೆ
ಮಂಗಳೂರು ದಸರಾ ವಿಶೇಷ
ಮಂಗಳೂರು, ಅ. 8: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ವತಿಯಿಂದ ಸುಮಾರು 10 ಸಾವಿರ ಮಂದಿಗೆ ಆರೋಗ್ಯ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದೆ ಈ ಬಾರಿಯ ದಸರಾ ಸಂದರ್ಭದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು.
ನಗರದ ಎ.ಜೆ.ಆಸ್ಪತ್ರೆ ಹಾಗೂ ಯುನಿಟಿ ಆಸ್ಪತ್ರೆಯ ಜೊತೆ ಈ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಆಡಳಿತ ಸಮಿತಿಯ ಖಜಾಂಜಿ ಪದ್ಮ ರಾಜ್.ಆರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಗರದ ಎ.ಜೆ.ಇನ್ಸಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ಯುನಿಟಿ ಆಸ್ಪತ್ರೆ ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಈ ಆರೋಗ್ಯ ಕಾರ್ಡ್ ಹೊಂದುವ ಪ್ರತಿ ವ್ಯಕ್ತಿ ಹಾಗೂ ಆತನ ಕುಟುಂಬದ ಸದಸ್ಯರಿಗೆ ಚಿಕಿತ್ಸೆ ಹಾಗೂ ಇತರ ವೆಚ್ಚದಲ್ಲಿ ಶೇ 25 ರಿಯಾಯಿತಿ ದೊರೆಯಲಿದೆ. ಈ ಯೋಜನೆಗೆ ಅ.18ರಂದು ಚಾಲನೆ ನೀಡಲಾಗುವುದು .ಪ್ರಾರಂಭಿಕ ಹಂತದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಒಂದು ಸಾವಿರ ಜನರಿಗೆ ಈ ಕಾರ್ಡ್ ವಿತರಿಸಲಾಗುವುದು .ಕಳೆದ ದಸರಾ ಸಂದರ್ಭದಲ್ಲಿ ವಿದ್ಯಾನಿಧಿ ಆರೋಗ್ಯ ನಿಧಿ,ಸಾಮಾಜಿಕ ನಿಧಿಯನ್ನು ಸ್ಥಾಪನೆ ಮಾಡಲಾಗಿತ್ತು .ಈ ಪೈಕಿ ಸಂಗ್ರಹ ವಾದ 25ಲಕ್ಷ ರೂ ಮೊತ್ತದಲ್ಲಿ 15 ಲಕ್ಷ ರೂ ವಿದ್ಯಾನಿಧಿ, 5ಲಕ್ಷ ರೂ ಆರೋಗ್ಯ ನಿಧಿಗೆ,ಹಾಗೂ 5ಲಕ್ಷ ರೂ ಸಾಮಾಜಿಕ ನಿಧಿಗೆ ವಿತರಣೆ ಮಾಡಲಾಗಿದೆ. ಕಳೆದ ಬಾರಿ ಕ್ಷೇತ್ರದ ವತಿಯಿಂದ ಪದವಿ ಪೂರ್ವ ಶಿಕ್ಷಣದಿಂದ ಹಿಡಿದು ವಿವಿಧ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ 524 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಈ ಯೋಜನೆಯನ್ನು ಈ ಬಾರಿಯೂ ಮುಂದುವರಿಸಲಾಗುವುದು ಎಂದು ಪದ್ಮ ರಾಜ್ ತಿಳಿಸಿದ್ದಾರೆ.
ರಾಜ್ಯದ ಮುಖ್ಯ ಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅ.14ರಂದು ಸಂಜೆ 6 ಗಂಟೆಗೆ ಮಂಗಳೂರು ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದು ಪದ್ಮ ರಾಜ್ ತಿಳಿಸಿದ್ದಾರೆ.
ರಾಜ್ಯದ ಜಿಲ್ಲೆಗಳ ಕಲಾ ತಂಡಗಳ ಪ್ರದರ್ಶನ:- ಈ ಬಾರಿಯ ಮಂಗಳೂರು ದಸರಾ ಉತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡಗಳು ಭಾಗವಹಿ ಸಲಿದೆ. ಅ.10ರಿಂದ 20ರವರೆಗೆ ನಡೆಯಲಿರುವ ನವರಾತ್ರಿ ಮಹೋತ್ಸವಕ್ಕೆ ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವ ರ ಎಂ.ಎಸ್.ಚಾಲನೆ ನೀಡಲಿದ್ದಾರೆ.
ದಸರಾ ನವಸಿರಿ ಕಲಾ ಸಂಭ್ರಮ:-
ಅ.10ರಿಂದ ಸಂಜೆ 6ರಿಂದ ಪ್ರತಿ ದಿನ ಸಂಜೆ 6ರಿಂದ ವಿವಿಧ ಕಲಾ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ನೃತ್ಯ, ಜಾದೂ, ನೈತ್ಯ ರೂಪಕ, ನವ ವೀಣಾ ವಾದನ, ತೈಯಂ,ರಸಮಂಜರಿ, ಯಕ್ಷ ನೃತ್ಯ ಕಾರ್ಯಕ್ರಮ ಜರುಗಲಿದೆ ಎಂದು ಪದ್ಮ ರಾಜ್ ತಿಳಿಸಿದ್ದಾರೆ.
ಶ್ರೀ ಗೋಕರ್ಣನಾಥ ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಆಡಳಿತ ಸಮಿತಿಯ ಸದಸ್ಯರಾದ ಮಾದವ ಸುವರ್ಣ, ಪದ್ಮರಾಜ ಆರ್ ನ್ಯಾಯವಾದಿ ,ಬಿ.ಕೆ.ತಾರಾನಾಥ ,ದೇವಾಸ್ಥಾನ ಅಭಿವೃದ್ಧಿ ಸಮಿತಿ ಸಹ ಅಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಸದಸ್ಯ ರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜಿ ಸುವರ್ಣ,ಶೇಖರ ಪೂಜಾರಿ, ರಾಧಾಕೃಷ್ಣ, ಡಿ.ಡಿ.ಕಟ್ಟೆಮಾರ್, ಅನಸೂಯ ಬಿ.ಟಿ.ಸಾಲ್ಯಾನ್, ಲೀಲಾಧರ ಕರ್ಕೆರಾ ಮೊದಲಾದವರು ಉಪಸ್ಥಿತರಿದ್ದರು.