ನ. 23ರಿಂದ ಫರಂಗಿಪೇಟೆಯಲ್ಲಿ 19ನೆ ಕನ್ನಡ ಸಾಹಿತ್ಯ ಸಮ್ಮೇಳನ
ಸ್ವಾಗತ ಸಮಿತಿ ರಚನೆ, ಗೌರವಾಧ್ಯಕ್ಷರಾಗಿ ಸಚಿವ ಯು.ಟಿ. ಖಾದರ್
ಬಂಟ್ವಾಳ, ಅ. 8: ತಾಲೂಕಿನ 19ನೆ ಕನ್ನಡ ಸಾಹಿತ್ಯ ಸಮ್ಮೇಳನವು ನ.23ರಿಂದ 24ವರೆಗೆ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಸಭಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಹೇಳಿದ್ದಾರೆ.
ತಾಲೂಕಿನ ಫರಂಗಿಪೇಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ವತಿಯಿಂದ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಮಿತಿ ರಚನೆ:
ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಸಚಿವ ಯು.ಟಿ. ಖಾದರ್ ಮತ್ತು ಅಧ್ಯಕ್ಷರಾಗಿ ಬಿ.ಎ. ಕಾಲೇಜು ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಆಯ್ಕೆಯಾಗಿದ್ದಾರೆ. ಸಮಿತಿ ಕಾರ್ಯಾಧ್ಯಕ್ಷರಾಗಿ ಕೃಷ್ಣ ಕುಮಾರ್ ಪೂಂಜ, ಪ್ರಧಾನ ಕಾರ್ಯದರ್ಶಿಯಾಗಿ ಸುಜಾತ ಕುಮಾರಿ ಮತ್ತು ವಿ.ಎಸ್.ಭಟ್, ಜತೆ ಕಾರ್ಯದರ್ಶಿಯಾಗಿ ಹೇಮಾ ಕೆ. ಮಯ್ಯ ಮತ್ತು ಕರುಣಾಕರ ಕಡೆಗೋಳಿ, ಉಪಾಧ್ಯಕ್ಷರಾಗಿ ಎ.ಸಿ.ಭಂಡಾರಿ, ಮಹಮ್ಮದ್ ಬಾವ, ಕವಿತಾ ದೇವದಾಸ್, ಜಪ್ರುಲ್ಲಾ ಒಡೆಯರ್, ಬಿ.ಎಂ.ಅಬ್ಬಾಸ್ ಅಲಿ, ಉಮೇಶ್ ಬರ್ಕೆ, ಖಜಾಂಚಿಯಾಗಿ ಸೋಮಪ್ಪ ಕೋಟ್ಯಾನ್ ಅವರನ್ನು ಆಯ್ಕೆಗೊಳಿಸಲಾಯಿತು.
ಪ್ರಚಾರ ಸಮಿತಿ ಸಂಚಾಲಕರಾಗಿ ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ, ವಿಕ್ರಂ ಬರ್ಕೆ, ಸತೀಶ್ ಕುಮಾರ್ ಕಾರ್ತಿಕ್ ಸ್ಟುಡಿಯೊ ಬಿ.ಸಿ.ರೋಡ್, ಆರ್ಥಿಕ ಸಮಿತಿ ಸಂಚಾಲಕರಾಗಿ ಕೊಡ್ಮಾಣ್ ದೇವದಾಸ ಶೆಟ್ಟಿ, ಸ್ವಯಂ ಸೇವಾ ಸಮಿತಿ ಸಂಚಾಲಕರಾಗಿ ಮುಹಮ್ಮದ್ ತುಂಬೆ, ನೋಂದಣಿ ಸಮಿತಿ ಸಂಚಾಲಕರಾಗಿ ಕೆ.ಆರ್. ದೇವದಾಸ್, ಉಮಾ ಚಂದ್ರಶೇಖರ್, ವೇದಿಕೆ ಸಮಿತಿ ಸಂಚಾಲಕರಾಗಿ ಮನೋಹರ ಅರ್ಕುಳ, ಸುಕೇಶ್ ಶೆಟ್ಟಿ ತೇವು, ಸರಪಾಡಿ ಅಶೋಕ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಡಿ.ಬಿ. ಅಬ್ದುಲ್ ರಹಿಮಾನ್, ಮೆರವಣಿಗೆ ಸಮಿತಿ ಸಂಚಾಲಕರಾಗಿ ಎ. ಗೋಪಾಲ ಅಂಚನ್, ಪ್ರಕಾಶ ಶೆಟ್ಟಿ ತುಂಬೆ, ಸನ್ಮಾನ ಸಮಿತಿ ಸಂಚಾಲಕರಾಗಿ ತಾರಾನಾಥ ಕೊಟ್ಟಾರಿ, ಮಂಜು ವಿಟ್ಲ, ಸ್ಮರಣ ಸಂಚಿಕೆ ಸಮಿತಿ ಸಂಚಾಲಕರಾಗಿ ಮಹಾಬಲೇಶ್ವರ ಹೆಬ್ಬಾರ್, ರಾಜಾ ಬಂಟ್ವಾಳ, ದಿನೇಶ ಶೆಟ್ಟಿ ಅಳಿಕೆ, ರಾಜಾರಾಮ ವರ್ಮ ವಿಟ್ಲ, ಪುಸ್ತಕ ಪ್ರದರ್ಶನ ಸಮಿತಿ ಸಂಚಾಲಕರಾಗಿ ದಿನೇಶ್ ಎನ್.ತುಂಬೆ, ವಸ್ತು ಪ್ರದರ್ಶನ ಸಮಿತಿ ಸಂಚಾಲಕರಾಗಿ ನಾಗೇಶ್ ಪಿ.ಎನ್., ಹಸಿರುವಾಣಿ ಸಮಿತಿ ಸಂಚಾಲಕರಾಗಿ ಬಿ.ನಾರಾಯಣ ಬೆಳ್ಚಡ ಮೇರಮಜಲು, ಪ್ರಶಾಂತ ಅರ್ಕುಳ, ಧನ್ಯರಾಜ್ ಮಜಿ ತುಂಬೆ ಆಯ್ಕೆಗೊಂಡರು. ಇದೇ ವೇಳೆ ವಿವಿಧ ಉಪ ಸಮಿತಿ ರಚಿಸಲಾಯಿತು.
ಕಸಾಪ ಮಾಜಿ ಅಧ್ಯಕ್ಷರಾದ ಜಯಾನಂದ ಪೆರಾಜೆ, ಬಿ.ತಮ್ಮಯ್ಯ, ಉದ್ಯಮಿ ಎಫ್. ಮಹಮ್ಮದ್, ಸೇವಾಂಜಲಿ ಪ್ರತಿಷ್ಠಾನ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಉಪಸ್ಥಿತರಿದ್ದರು. ಕಲಾವಿದ ಮಂಜು ವಿಟ್ಲ ಸ್ವಾಗತಿಸಿ, ವಂದಿಸಿದರು.