ಎಸ್ಸೆಸ್ಸೆಫ್ ಉಳ್ಳಾಲ, ತೊಕ್ಕೊಟ್ಟು ಸೆಕ್ಟರ್ ವತಿಯಿಂದ ಬ್ಲಡ್ ಸೈಬೋ
ಮಂಗಳೂರು, ಅ. 10: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮತ್ತು ತೊಕ್ಕೊಟ್ಟು ಸೆಕ್ಟರ್ ಇದರ ಜಂಟಿ ಆಶ್ರಯದಲ್ಲಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಸಹಭಾಗಿತ್ವದೊಂದಿಗೆ ರಕ್ತದಾನ ಶಿಬಿರವು ಪೇಟೆ ಸಮುದಾಯ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವಿಶನ್ ಅಧ್ಯಕ್ಷ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ವಹಿಸಿದ್ದರು. ಎಸ್ಸೆಸ್ಸೆಫ್ ಜಿಲ್ಲಾ ನಾಯಕ ಇಸ್ಮಾಯಿಲ್ ಮಾಸ್ಟರ್ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಡಿವಿಶನ್ ನಾಯಕ ಸೆಯ್ಯದ್ ಖುಬೈಬ್ ತಂಙಳ್ ಮತ್ತು ಡಿವಿಶನ್ ಬ್ಲಡ್ ಇನ್ಚಾರ್ಜ್ ಇಲ್ಯಾಸ್ಪೊಟ್ಟೊಳಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ನೇತೃತ್ವವನ್ನು ಉಳ್ಳಾಲ ಸೆಕ್ಟರ್ ಅಧ್ಯಕ್ಷ ಮುಸ್ತಫಾ ಮಾಸ್ಟರ್, ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಜಾಫರ್ ಯು.ಎಸ್ ವಹಿಸಿದರು. ಉಳ್ಳಾಲ ಸೆಕ್ಟರ್ ಪ್ರ. ಕಾರ್ಯದರ್ಶಿ ಹಂಝ ಯು.ಬಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮುಖ್ಯ ಅತಿಥಿಗಳಾಗಿ ಉಳ್ಳಾಲ ಪುರಸಭೆ ಕೌನ್ಸಿಲರ್ಗಳಾದ ಯು.ಎ.ಇಸ್ಮಾಯಿಲ್ ಹಳೇಕಳ, ಉಸ್ಮಾನ್ ಕಲ್ಲಾಪು, ಅಝೀಝ್ ಕೋಡಿ, ಜಬ್ಬಾರ್ ಮೇಲಂಗಡಿ ಉಪಸ್ಥಿತರಿದ್ದರು. ಗಣ್ಯ ವ್ಯಕ್ತಿಗಳಾಗಿ ಉಳ್ಳಾಲ ಡಿವಿಶನ್ ಪ್ರ. ಕಾರ್ಯದರ್ಶಿ ಹಮೀದ್ ತಲಪಾಡಿ, ರಾಜ್ಯ ನಾಯಕ ಅಲ್ತಾಫ್ ಕುಂಪಲ, ಉಳ್ಳಾಲ ಸೆಂಟರ್ ಸದಸ್ಯರಾದ ಹನೀಫ್ ಹಾಜಿ, ಅಶ್ರಫ್ ಯು.ಡಿ., ಇಲ್ಯಾಸ್ ಕೈಕೊ, ಸಮೀರ್ ಸೇವಂತಿಗುಡ್ಡೆ ಹಾಗೂ ಇನ್ನಿತರ ಉಲಮಾ ಉಮರ ನಾಯಕರು ಭಾಗವಹಿಸಿದ್ದರು.