ಪರಸರ ತಜ್ಞ ಶ್ರೀಪಡ್ರೆಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ
ಕೋಟ, ಅ.10: ಪರಿಸರ ಸಂರಕ್ಷಣೆ ಎಂಬುದು ಪ್ರತಿಯೊಬ್ಬ ಭಾರತೀಯರ ಬಹು ದೊಡ್ಡ ಕರ್ತವ್ಯವಾಗಬೇಕು ಎಂದು ನಾಡಿನ ಖ್ಯಾತನಾಮ ಪರಿಸರ ಹಾಗೂ ಜಲತಜ್ಞ ಶ್ರೀಪಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಕೋಟದಲ್ಲಿರುವ ಕಾರಂತ ಥೀಂ ಪಾರ್ಕ್ನಲ್ಲಿ ಕೋಟತಟ್ಟು ಗ್ರಾಪಂ, ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಟಾನ ಹಾಗೂ ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್ ಸಹಯೋಗದಲ್ಲಿ ನೀಡಲಾದ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತಿದ್ದರು.
ಕೋಟದಲ್ಲಿರುವ ಕಾರಂತ ಥೀಂ ಪಾರ್ಕ್ನಲ್ಲಿ ಕೋಟತಟ್ಟು ಗ್ರಾಪಂ, ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಟಾನ ಹಾಗೂ ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್ ಸಹಯೋಗದಲ್ಲಿ ನೀಡಲಾದ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತಿದ್ದರು.
ಕರಾವಳಿ ಜಿಲ್ಲೆಗಳಲ್ಲಿ ಪ್ರತಿವರ್ಷ ಅತ್ಯಧಿಕ ಮಳೆ ಬೀಳುತ್ತಿದ್ದರೂ ಬರ ಪರಿಸ್ಥಿತಿ ನಮ್ಮನ್ನು ಪ್ರತಿ ಬಾರಿ ಕಾಡುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಇಲ್ಲಿನ ಜನತೆ ಹಾಗೂ ಸರಕಾರಗಳು ಚಿಂತಿಸಬೇಕು. ಶಾಲಾ-ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಪ್ರಕೃತಿ ಸಂರಕ್ಷಣೆ ಹಾಗೂ ನೀರು ಇಂಗಿಸುವ ಬಗ್ಗೆ ಪಠ್ಯಗಳಿರು ವಂತಾಗಬೇಕು. ಇದರೊಂದಿಗೆ ಎನ್ನೆಸ್ಸೆಸ್ ಮತ್ತು ಇತರ ಸಂಘಟನೆಗಳ ಸಹಯೋಗದೊಂದಿಗೆ ಸುತ್ತಮುತ್ತ ಹರಿಯುವ ನೀರಿಗೆ ಚಿಕ್ಕ ಚಿಕ್ಕ ಕಟ್ಟುಗಳನ್ನು ಕಟ್ಟುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಆಂದೋಲನ ನಡೆಸಿ ನೀರಿನ ಇಂಗಿಸುವಕಾರ್ಯ ಆದಲ್ಲಿ ಮಾತ್ರ ಬರ ಪರಿಸ್ಥಿತಿಯನ್ನು ದೂರಮಾಡಬಹುದು ಎಂದವರು ಅಭಿಪ್ರಾಯ ಪಟ್ಟರು.
ಸರಕಾರದ ಯೋಜನೆಗಳು ಪ್ರಕೃತಿಯನ್ನು ಉಳಿಸುವತ್ತ ಇರಬೇಕು. ಪ್ರಕೃತಿ ಯನ್ನು ಬಗೆದು ಹಣ ದೋಚುವ ಕೆಲಸ ನಿಲ್ಲಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಹೀಗಾದಲ್ಲಿ ಮಾತ್ರ ಪ್ರಕೃತಿ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು. ಇವುಗಳೊಂದಿಗೆ ಮಾಧ್ಯಮಗಳ ಧೋರಣೆಯೂ ಬದಲಾಗ ಬೆೀಕು ಎಂದು ಶ್ರೀಪಡ್ರೆ ನುಡಿದರು.
ಸರಕಾರದ ಯೋಜನೆಗಳು ಪ್ರಕೃತಿಯನ್ನು ಉಳಿಸುವತ್ತ ಇರಬೇಕು. ಪ್ರಕೃತಿ ಯನ್ನು ಬಗೆದು ಹಣ ದೋಚುವ ಕೆಲಸ ನಿಲ್ಲಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಹೀಗಾದಲ್ಲಿ ಮಾತ್ರ ಪ್ರಕೃತಿ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು. ಇವುಗಳೊಂದಿಗೆ ಮ್ಯಾಮಗಳೋರಣೆಯೂ ಬದಲಾಗ ಬೇಕು ಎಂದು ಶ್ರೀಪಡ್ರೆ ನುಡಿದರು. ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಮಾತನಾಡಿ, ಕಾರಂತರ ಹೆಸರಿನಲ್ಲಿ ಒಂದು ಚಿಕ್ಕ ಊರಿನ ಗ್ರಾಪಂ ಹುಟ್ಟೂರ ಪ್ರಶಸ್ತಿ ನೀಡುತ್ತಿುವುದು ದೊಡ್ಡ ಸಾಧನೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಸದೆ ಶೋಬಾ ಕರಂದ್ಲಾಜೆ ಉದ್ಘಾಟಿಸಿದರು. ಸಮಾಜದ ಒರೆಕೊರೆಗಳ ವಿರುದ್ಧ ಸಿಡಿದೆದ್ದ ಕಾರಂತರು ಸಮಾಜಮುಖಿ ಚಿಂತನೆಯ ಹರಿಕಾರರಾಗಿದ್ದರು. ಅವರ ಹೆಸರಿನಲ್ಲಿ ಶ್ರೀಪಡ್ರೆಗೆ ಪ್ರಶಸ್ತಿ ನೀಡುತ್ತಿರುವುದು ಪ್ರಶಸಿ್ತ ವೌಲ್ಯವನ್ನು ಹೆಚ್ಚಿಸಿದೆ ಎಂದರು.
ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ನಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ ನೀಲಾವರ, ಕೋಟ ಗ್ರಾಪಂ ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ಕಾರಂತ ಥೀಂ ಪಾರ್ಕ್ನ ಪ್ರಧಾನ ಕಾರ್ಯದರ್ಶಿ ನರೇಂದ್ರ ಕುಮಾರ್, ಉಡುಪಿ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್, ತಾಂ ಸದಸ್ಯೆ ಲಲಿತಾ ಉಪಸ್ಥಿತರಿದ್ದರು.
ಪ್ರಶಸ್ತಿ ಆಯ್ಕೆ ಸಮಿತಿಯ ಯು.ಎಸ್.ಶೆಣೈ ಶ್ರೀಪಡ್ರೆ ಅವರನ್ನು ಸಬೆಗೆ ಪರಿಚಯಿಸಿದರು. ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಶ್ರೀಧರ್ ಹಂದೆ ಯಕ್ಷಗಾನ ಶೈಲಿಯಲ್ಲಿ ಶ್ರೀಪಡ್ರೆ ಅವರ ಕುರಿತು ಗಮನ ವಾಚಕದ ಮೂಲಕ ಹಾಡಿ ಗಮನ ಸೆಳೆದರು.
ಪ್ರತಿಷ್ಟಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಸ್ವಾಗತಿಸಿ, ಕೋಟತಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಾತ ಲಕ್ಕಪ್ಪನವರ್ ವಂದಿಸಿದರು. ಸುಶ್ಮಿತಾ ಪಾರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.