ಪತ್ರಿಕಾ ಏಜೆಂಟ್ ರಾಘವ ನಾಯಕ್ ನಿಧನ
ಬಂಟ್ವಾಳ, ಅ.10: ಕನ್ಯಾನ ಗ್ರಾಮದ ಪಂಜಾಜೆ ನಿವಾಸಿ, ವಾರ್ತಾಭಾರತಿ ಪತ್ರಿಕಾ ಏಜೆಂಟ್ ರಾಘವ ನಾಯಕ್ (76) ಅವರು ಅಸೌಖ್ಯದಿಂದ ಬುಧವಾರ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ರಾಘವ ನಾಯಕ್ ಅವರು ಕಳೆದ 15 ವರ್ಷಗಳಿಂದ ವಾರ್ತಾಭಾರತಿ ಪತ್ರಿಕಾ ಏಜೆಂಟ್ ಆಗಿ ಸೇವೆ ಸಲ್ಲಿಸಿದ್ದರು. ಪುತ್ತೂರು ಬಪ್ಪಳಿಗೆ ಶಾರದಾಂಬಾ ಸೇವಾ ಸಮಿತಿಯ ಸ್ಥಾಪಕ ಸದಸ್ಯರಾಗಿರುವ ರಾಘವ ನಾಯಕ್ ಅವರ ಸೇವೆಯನ್ನು ಗುರುತಿಸಿ, ಶಾರದಾಂಬಾ ಸೇವಾ ಸಮಿತಿ ಸಹಿತ ಹಲವು ಸಂಘ ಸಂಸ್ಥೆಗಳ ವತಿಯಿಂದ ಸಮ್ಮಾನಿಸಲಾಗಿತ್ತು.
Next Story