ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಶಿವಸೇನೆಗೆ ಯಾವುದೇ ಪಾತ್ರವಿಲ್ಲ
ಉ.ಪ್ರದೇಶ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ
ಅಯೋಧ್ಯೆ, ನ.25: ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಶಿವಸೇನೆಗೆ ಯಾವುದೇ ಪಾತ್ರವಿಲ್ಲ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣದ ದಿನಾಂಕ ಘೋಷಿಸುವಂತೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ ನಂತರ ಮೌರ್ಯರ ಈ ಹೇಳಿಕೆ ಹೊರಬಿದ್ದಿದೆ. “ಬಾಳಾಸಾಹೇಬ್ ಠಾಕ್ರೆ ಬದುಕಿರುತ್ತಿದ್ದರೆ, ಉದ್ಧವ್ ಏನು ಮಾಡುತ್ತಿದ್ದಾರೋ ಅದನ್ನು ತಡೆಯುತ್ತಿದ್ದರು” ಎಂದವರು ಹೇಳಿದರು.
Next Story