ಮೋದಿ ಸರಕಾರದಷ್ಟು ಸುಳ್ಳು ಹೇಳಿದ ಇನ್ನೊಂದು ಸರಕಾರವಿಲ್ಲ: ಮಾಜಿ ಕೇಂದ್ರ ಸಚಿವ ಅರುಣ್ ಶೌರಿ
ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ವಿಪಕ್ಷಗಳ ಮೆಗಾ ರ್ಯಾಲಿ
ಕೊಲ್ಕತ್ತಾ, ಜ.19: ಈ ಸರಕಾರದಷ್ಟು ಸುಳ್ಳು ಹೇಳಿದ ಇನ್ನೊಂದು ಸರಕಾರವಿಲ್ಲ. ಯಾವುದೇ ಸರಕಾರವು ನೋಟು ಅಮಾನ್ಯದಂತಹ ಅವಿವೇಕದ ನಿರ್ಧಾರ ಕೈಗೊಂಡಿಲ್ಲ, ಜಿಎಸ್ ಟಿಯನ್ನು ಕಳಪೆಯಾಗಿ ಜಾರಿಗೊಳಿಸಿಲ್ಲ ಎಂದು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಹೇಳಿದರು.
ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿಯವರು ಹಮ್ಮಿಕೊಂಡ ವಿಪಕ್ಷಗಳ ಮೆಗಾ ರ್ಯಾಲಿಯಲ್ಲಿ ಮಾತನಾಡಿದ ಅವರು, “ದೇಶದ ಆರ್ಥಿಕತೆಯು ಅನಿಶ್ಚಿತತೆಯಲ್ಲಿದೆ. ಸರಕಾವು ಅಂಕಿ ಅಂಶಗಳನ್ನು ಉತ್ಪ್ರೇಕ್ಷಿಸುತ್ತದೆ. ಆದರೆ ಸತ್ಯವೇನು ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಸರಕಾರವು ದೇಶ ಮತ್ತು ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದೆ” ಎಂದು ಹೇಳಿದರು.
Next Story