ಯಾವ ಸಾಧನೆಗೆ ನಂಬಿನಾರಾಯಣ್ರಿಗೆ ಪದ್ಮಭೂಷಣ: ಕೇರಳದ ಮಾಜಿ ಡಿಜಿಪಿ ಪ್ರಶ್ನೆ
ತಿರುವನಂತಪುರಂ,ಜ.26: ಇಸ್ರೋ ಮಾಜಿ ವಿಜ್ಞಾನಿ ನಂಬಿನಾರಾಯಣ್ರಿಗೆ ಪದ್ಮಭೂಷಣ ನೀಡಿದ್ದಕ್ಕೆ ಕೇರಳದ ಮಾಜಿ ಡಿಜಿಪಿ ಟಿಪಿ ಸೇನ್ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪದ್ಮಶ್ರೀ ಪಡೆಯಲು ಅವರು ಯಾವ ಸಾಧನೆ ಮಾಡಿದ್ದಾರೆ. ಪ್ರಶಸ್ತಿ ಕೊಟ್ಟವರೇ ಇದನ್ನು ಸ್ಪಷ್ಟಪಡಿಸಬೇಕು. ಸಾಮಾನ್ಯ ಮಟ್ಟದ ವಿಜ್ಞಾನಿ ನಂಬಿ ನಾರಾಯಣನ್ ಎಂದು ಸೇನ್ಕುಮಾರ್ ಹೇಳಿದ್ದಾರೆ. ಹಿಗೆಂದಾದರೆ ಮರಿಯಂ ರಶೀದಾಗೂ, ಕೊಲೆ ಆರೋಪಿಗಳಾದ ಗೋವಿಂದ ಚಾಮಿಗೂ, ಅಮೀರುಲ್ ಇಸ್ಲಾಂಗೂ ಪ್ರಶಸ್ತಿ ಬರಬಹುದು ಎಂದು ಸೇನ್ಕುಮಾರ್ ವ್ಯಂಗ್ಯವಾಡಿದ್ದಾರೆ.
ಸುಪ್ರಿಂಕೋರ್ಟಿನ ಸಮಿತಿ ಇಸ್ರೊ ಬೇಹುಗಾರಿಕೆಯನ್ನು ಪರಿಶೀಲಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ನಂಬಿ ನಾರಾಯಣನ್ರಿಗೆ ಪ್ರಶಸ್ತಿ ನೀಡಿದ್ದೇಕೆ?. ತನಿಖೆ ನಡೆದ ಬಳಿಕ ಅವರಿಗೆ ಭಾರತ ರತ್ನ ನೀಡಿದರೂ ತಾನದನ್ನು ಸ್ವಾಗತಿಸುವೆನೆಂದು ಸೇನ್ಕುಮಾರ್ ಹೇಳಿದರು.
Next Story