ಗಾಂಧಿ ಪ್ರತಿಕೃತಿಗೆ ಗುಂಡಿಕ್ಕಿದ ಹಿಂದೂ ಮಹಾಸಭಾ ನಾಯಕಿಯ ಬಂಧನ
ಆಲಿಘರ್, ಫೆ.6: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪ್ರತಿಕೃತಿಗೆ ಗುಂಡಿಕ್ಕಿದ ಅಖಿಲ ಭಾರತ ಹಿಂದೂ ಮಹಾಸಭಾ ನಾಯಕಿ ಪೂಜಾ ಪಾಂಡೆ ಮತ್ತು ಆಕೆಯ ಪತಿ ಅಶೋಕ್ ಪಾಂಡೆಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಉ.ಪ್ರದೇಶದ ತಪ್ಪಲ್ ಎಂಬಲ್ಲಿಂದ ಈ ಇಬ್ಬರಿಂದ ಬಂಧಿಸಲಾಗಿದೆ.
“ಯಾವುದೇ ಪಶ್ಚಾತ್ತಾಪವಿಲ್ಲ. ನಾನು ಯಾವುದೇ ಅಪರಾಧ ಮಾಡಿಲ್ಲ. ನಮ್ಮ ಸಾಂವಿಧಾನಿಕ ಹಕ್ಕನ್ನು ಬಳಸಿದ್ದೇವೆ ಅಷ್ಟೇ” ಎಂದು ಪೂಜಾ ಪಾಂಡೆ ತನ್ನ ಬಂಧನದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಈ ಮೊದಲು ಮಹಾತ್ಮಾ ಗಾಂಧೀಜಿಯವರ ಪ್ರತಿಕೃತಿ ದಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿತ್ತು,
Next Story