ಗ್ಯಾಸ್ ಸ್ಫೋಟ: ಇಬ್ಬರಿಗೆ ಗಾಯ
ಬೆಂಗಳೂರು, ಫೆ.27: ಭೂ-ಕಾಲುವೆಯಲ್ಲಿ ಅಳವಡಿಸಿರುವ ಗ್ಯಾಸ್ ಪೈಪ್ಲೈನ್ ಬಳಿಕ ಕೆಇಬಿ ಕಾಮಗಾರಿ ನಡೆಸುತ್ತಿದ್ದ ವೇಳೆ ಸೋರಿಕೆಯಾಗಿ ಸ್ಫೋಟಗೊಂಡು ಇಬ್ಬರು ಗಾಯಗೊಂಡಿರುವ ಘಟನೆ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಪರಪ್ಪನ ಅಗ್ರಹಾರದ ನಾಗನಾಥಪುರದ ಮುನೇಶ್ವರ ಕಾಲನಿಯ ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುನೇಶ್ವರ ಕಾಲನಿಯಲ್ಲಿ ಕೆಇಬಿ ಕಾಮಗಾರಿ ವೇಳೆ ನೆಲವನ್ನು ಅಗೆದ ಕಾರ್ಮಿಕರಿಗೆ ಗ್ಯಾಸ್ ಪೈಪ್ಲೈನ್ ಕೆಳಗೆ ಹಾದು ಹೋಗಿರುವ ಮಾಹಿತಿ ಇರಲಿಲ್ಲ. ಈ ವೇಳೆ ಗ್ಯಾಸ್ ಸಿಡಿದು ಗೋಡೆ ಕುಸಿದಿದೆ. ರಸ್ತೆಯಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ, ಮಾಹಿತಿ ಪಡೆದರು.
Next Story