ಮಾ.10: ಪರ್ಲಿಯಾದಲ್ಲಿ ಪಿ.ಎಫ್.ಐ ವತಿಯಿಂದ ರಕ್ತದಾನ ಶಿಬಿರ
ಬಂಟ್ವಾಳ, ಮಾ. 9: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಹಾಗೂ ಯೆನಪೋಯ ಆಸ್ಪತ್ರೆ ದೇರಳಕಟ್ಟೆ ಸಹಯೋಗದಲ್ಲಿ ಮಾ10 ರಂದು ಪರ್ಲಿಯಾ ನರ್ಸಿಂಗ್ ಹೋಮ್ ನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್ ವಹಿಸಲಿದ್ದಾರೆ.
ಮುಖ್ಯಅಥಿತಿಗಳಾಗಿ ಬಂಟ್ವಾಳ ಉಪ ವಿಭಾಗದ ಎ.ಎಸ್.ಪಿ ಸೈದುಲ್ ಅಡಾವತ್, ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಡಾ ಹಿಪ್ಝುರ್ರಹ್ಮಾನ್ , ಪರ್ಲಿಯಾ ನರ್ಸಿಂಗ್ ಹೋಮ್ ವೈದ್ಯಾಧಿಕಾರಿ ಡಾ. ಸೊಮೇಶ್ , ವಾರ್ತಾಭಾರತಿಯ ಉಪಸಂಪಾದಕ ಇಮ್ತಿಯಾಝ್ ಶಾ ತುಂಬೆ, ಬಂಟ್ವಾಳ ಪುರಸಭಾ ಸದಸ್ಯ ಮೂನೀಶ್ ಆಲಿ ಬಂಟ್ವಾಳ, ಪಿ.ಎಫ್.ಐ ಬಿಸಿರೋಡ್ ವಲಯಾಧ್ಯಕ್ಷ ಅಬ್ದುಲ್ ರಹಿಮಾನ್ ಗೂಡಿನಬಳಿ, ಅರಫಾ ಜುಮಾ ಮಸ್ಜಿದ್ ಪರ್ಲಿಯಾ ಅಧ್ಯಕ್ಷ ಅಹ್ಮದ್ ಬಾವ, ಎನ್.ಎಮ್.ಎಸ್ ಅಧ್ಯಕ್ಷರು ಶಾಂತಿ ಅಂಗಡಿ ಹಮೀದ್ ಜಿಕೆ, ನೂರಾನಿಯ ಅಸೋಸಿಯೇಶನ್ ಪರ್ಲಿಯಾ ಅಧ್ಯಕ್ಷ ಬಶೀರ್ ವಿಟ್ಲ ಮತ್ತಿತರರು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.