ಕಾಸರಗೋಡು: ಲೋಕಸಭಾ ಚುನಾವಣಾ ಸಿಪಿಎಂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಕಾಸರಗೋಡು : ಲೋಕಸಭಾ ಚುನಾವಣಾ ದಿನಾಂಕ ಮೊದಲೇ ಸಿಪಿಎಂ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಕೆ.ಪಿ ಸತೀಶ್ಚಂದ್ರನ್ ರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ.
ಕಳೆದ ಮೂರು ಬಾರಿ ಸಂಸದರಾಗಿದ್ದ ಪಿ . ಕರುಣಾಕರನ್ ರನ್ನು ಈ ಬಾರಿ ಕೈಬಿಡಲಾಗಿದೆ . 2004 , 2009 ಮತ್ತು 2014 ರಲ್ಲಿ ಪಿ . ಕರುಣಾಕರನ್ ಲೋಕಸಭೆಗೆ ಆಯ್ಕೆಯಾಗಿದ್ದರು.
1996 ರಿಂದ 2016 ರ ತನಕ ಎರಡು ಬಾರಿ ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸತೀಶ್ಚಂದ್ರನ್ , 2008 ರಿಂದ 2018 ರ ತನಕ ಜಿಲ್ಲಾ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು .
ಎಸ್ ಎಫ್ ಐ ಮೂಲಕ ರಾಜಕೀಯ ಪ್ರವೇಶಿಸಿದ ಸತೀಶ್ಚಂದ್ರನ್ , 1988 ರಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾಗಿ ಆಯ್ಕೆಯಾದರು . ಕೆ ಎಸ್ ಕೆ . ಟಿ .ಯು ಜಿಲ್ಲಾ ಕಾರ್ಯದರ್ಶಿ , ಎಐಕೆಎಸ್ ಕೇಂದ್ರ ಸಮಿತಿ ಸದಸ್ಯ ರಾಗಿ ಆಯ್ಕೆಯಾಗಿದ್ದರು .
ಕಾಸರಗೋಡು ಸೇರಿದಂತೆ ಎಲ್ಲಾ 20 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಪಿ . ಕರುಣಾಕರನ್ ಹೊರತು ಪಡಿಸಿ ಉಳಿದ ಎಲ್ಲಾ ಹಾಲಿ ಸಿಪಿಎಂ ಸಂಸದರಿಗೆ ಟಿಕೆಟ್ ನೀಡಲಾಗಿದೆ. ಆರು ಮಂದಿ ಶಾಸಕರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ .
ತಿರುವನಂತಪುರ - ಸಿ . ದಿವಾಕರನ್ ( ಸಿಪಿಐ ), ಆಟಿಂಗಲ್ - ಎ . ಸಂಪತ್ ( ಸಿಪಿಎಂ ), ಕೊಲ್ಲಂ - ಕೆ . ಎನ್ ಬಾಲಗೋಪಾಲ್ ( ಸಿಪಿಎಂ), ಪತ್ತನಂತ್ತಿಟ್ಟ- ವೀಣಾ ಜೋರ್ಜ್ ( ಸಿಪಿಎಂ), ಮಾವೆಲಿಕ್ಕರ - ಚಿಟ್ಟಯ ಗೋಪಕುಮಾರ್ ( ಸಿಪಿಐ ), ಆಲಪ್ಪುಝ - ಎ . ಎಂ ಆರಿಫ್ (ಸಿಪಿಎಂ ), ಇಡುಕ್ಕಿ - ಜೈಸ್ ಜೋರ್ಜ್ ( ಸಿಪಿಎಂ ಸ್ವತಂತ್ರ ), ಕೋಟಯಂ - ವಿ . ಎನ್ ವಾಸವನ್ (ಸಿಪಿಎಂ), ಎರ್ನಾಕುಲಂ - ಪಿ . ರಾಜೀವ್ (ಸಿಪಿಎಂ), ಚಾಲಕ್ಕುಡಿ - ಇನ್ನಸೆಂಟ್ ( ಸಿಪಿಎಂ ಸ್ವತಂತ್ರ ), ತೃಶ್ಯೂರ್ - ರಾಜಾಜಿ ಮ್ಯಾಥ್ಯೂ ಥೋಮಸ್ ( ಸಿಪಿಐ ), ಆಲತ್ತೂರು -ಪಿ .ಕೆ ಬಿಜು (ಸಿಪಿಎಂ ), ಪಾಲಕ್ಕಾಡ್ - ಎಂ . ಬಿ ರಾಜೇಶ್ ( ಸಿಪಿಎಂ ), ಪೊನ್ನಾನಿ - ಎ . ವಿ ಅನ್ವರ್ ( ಸಿಪಿಎಂ ಸ್ವತಂತ್ರ ), ಮಲಪ್ಪುರಂ - ವಿ . ಪಿ ಸಾನ್ ( ಸಿಪಿಎಂ), ಕೋಜಿಕ್ಕೋಡು - ಎ ಪ್ರದೀಪ್ ಕುಮಾರ್ ( ಸಿಪಿಎಂ ), ವಡಗರ - ಪಿ . ಜಯರಾಜನ್ ( ಸಿಪಿಎಂ ), ವಯನಾಡು - ಪಿ .ಪಿ ಸುನೀರ್ ( ಸಿಪಿಐ)
ಕಣ್ಣೂರು - ಪಿ . ಕೆ ಶ್ರೀಮತಿ ( ಸಿಪಿಎಂ ), ಕಾಸರಗೋಡು ಕೆ . ಪಿ ಸತೀಶ್ಚಂದ್ರನ್ (ಸಿಪಿಎಂ ) ರಿಗೆ ಟಿಕೆಟ್ ನೀಡಲಾಗಿದೆ.