ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ಸ್ನೇಹಕೂಟ
ಮಂಗಳೂರು : ಮಂಗಳೂರಿನ ವಿವಿದ ರಕ್ತನಿಧಿಗಳ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಬಾಂಧವ್ಯವನ್ನು ಉತ್ತಮಗೊಳಿಸಲು ಹಾಗೂ ರಕ್ತ ಪೊರೈಕೆಯಲ್ಲಿ ಉತ್ತಮ ಸುಧಾರಣೆ ತರಲು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ನಗರದ ಓಷಿಯನ್ ಪರ್ಲ್ ಹೊಟೆಲ್ ನಲ್ಲಿ ಸ್ನೇಹಕೂಟ ಏರ್ಪಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಸಲಹೆಗಾರ ಮುಸ್ತಫಾ ಅಡ್ಡೂರು ದೆಮ್ಮಲೆ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿ, ಸಂಸ್ಥೆಯ ಉತ್ತಮ ಸುಧಾರಣೆಗಾಗಿ ರಕ್ತನಿಧಿ ಅಧಿಕಾರಿಗಳ ಸಲಹೆ ಹಾಗೂ ಸಹಕಾರವನ್ನು ಕೋರಿದರು.
ನಂತರ ನಡೆದ ಚರ್ಚಾಕೂಟದಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ನಿರ್ವಾಹಕರು ಪರಸ್ಪರ ರಕ್ತ ಪೊರೈಕೆಯಲ್ಲಿ ಎದುರಾಗುವ ತೊಂದರೆಗಳು ಹಾಗೂ ಪರಿಹಾರ, ತುರ್ತು ಪರಿಸ್ಥಿತಿಯಲ್ಲಿ ಯಾವ ರೀತಿ ನಿಭಾಯಿಸ ಬೇಕು, ಶಿಬಿರಗಳ ಮಾಹಿತಿ, ಶಿಬಿರಗಳಲ್ಲಿ ಎದುರಿಸುವ ತೊಂದರೆಗಳು, ಮಹಿಳೆಯರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗುವ ಸಲಹೆಗಳು ಮುಂತಾದ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಸಹಕಾರಿಯಾಗುವಂತಹ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು.
ಸಂಸ್ಥೆಯ ಕಾರ್ಯಚಟುವಟಿಕೆ ಮತ್ತು ಸಾಧನೆಗಳ ಬಗ್ಗೆ ಹಾಗೂ ಶಿಬಿರ ಆಯೋಜಿಸುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿ ಟೆಕ್ನಿಕಲ್ ಸುಪರ್ವೈಸರ್ ಎಡ್ವರ್ಡ್ ಮತ್ತು ಎ ಜೆ ಹಾಸ್ಪಿಟಲ್ ಕ್ವಾಲಿಟಿ ಆ್ಯಂಡ್ ಟೆಕ್ನಿಕಲ್ ಮ್ಯಾನೇಜರ್ ಪಿ.ಆರ್ ಗೋಪಾಲಕೃಷ್ಣ ಮಾತನಾಡುತ್ತಾ, ನಗರದ ಎಲ್ಲಾ ರಕ್ತನಿಧಿಗಳ ಸಹೋದ್ಯೋಗಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸ್ನೇಹಕೂಟ ನಡೆಸಿದ್ದು ದಶಕಗಳ ನಮ್ಮ ಸೇವೆಯಲ್ಲಿ ಇದೇ ಮೊದಲ ಬಾರಿ. ಕೆಲವರಂತೂ ಹಲವು ವರ್ಷಗಳ ಹಿಂದೆ ಜೊತೆಯಾಗಿ ಕೆಲಸ ನಿರ್ವಹಿಸಿದ್ದು ತದ ನಂತರ ಬೇರೆ ಬೇರೆ ಬೇರೆಯಾಗಿದ್ದರೂ, ಅನೇಕ ವರ್ಷಗಳ ನಂತರ ಈ ಮೂಲಕ ಭೇಟಿಯಾಗಲು ಸಾಧ್ಯವಾಯಿತು. ಅದೇ ರೀತಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ನಾವು ಜೊತೆಯಾಗಿ ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಇದುವರೆಗೆ ಸಿಗಲಿಲ್ಲ. ಪ್ರಪ್ರಥಮ ಬಾರಿಗೆ ಇದಕ್ಕೆ ನೀವು ಅನುವು ಮಾಡಿಕೊಟ್ಟಿದ್ದೀರಿ ಎಂದರು.
ಕಾರ್ಯಕ್ರಮದಲ್ಲಿ ಕಣಚೂರು ಹಾಸ್ಪಿಟಲ್ ರಕ್ತನಿಧಿ ಅಧಿಕಾರಿ ಡಾ. ಇಂದಿರಾ ಪುತ್ರನ್, ರಕ್ತನಿಧಿ ಟೆಕ್ನಿಕಲ್ ಸುಪರ್ವೈಸರ್ ವೆಂಕಟ್ ರಾಜ್ ರೈ, ಎ ಜೆ ಹಾಸ್ಪಿಟಲ್ ಕ್ವಾಲಿಟಿ ಆ್ಯಂಡ್ ಟೆಕ್ನಿಕಲ್ ಮ್ಯಾನೇಜರ್ ಪಿ.ಆರ್ ಗೋಪಾಲಕೃಷ್ಣ,ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿ ಟೆಕ್ನಿಕಲ್ ಸುಪರ್ವೈಸರ್ ಎಡ್ವರ್ಡ್,ಕೆ.ಎಸ್ ಹೆಗ್ಡೆ ನಿಟ್ಟೆ ಹಾಸ್ಪಿಟಲ್ ರಕ್ತನಿಧಿ ಟೆಕ್ನಿಷಿಯನ್ ಕೀರ್ತನ್ ಎಂ.ಎ, ಲ್ಯಾಬ್ ಇನ್ಸ್ಪೆಕ್ಟರ್ ಚಿದಾನಂದ್, ಮುಕ್ಕ ಹಾಸ್ಪಿಟಲ್ ಪ್ಯಾಥೋಲಾಜಿ ಹೆಡ್ ಒಫ್ ದಿ ಡಿಪಾರ್ಟ್ಮೆಂಟ್ ಡಾ. ಸುಕೇಶ್ ಕೊಟ್ಟಾರಿ, ವೆನ್ಲಾಕ್ ಆಸ್ಪತ್ರೆ ರಕ್ತನಿಧಿಯ ಟೆಕ್ನಿಕಲ್ ಸುಪರ್ವೈಸರ್ ಅಂಥೋನಿ ಡಿಸೋಜ, ತೇಜಸ್ವಿನಿ ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ. ಶಿಲ್ಪ ಪ್ರೇಮ್ ಕುಮಾರ್ ಹಾಗೂ ಕೆ ಎಂ ಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸ್ಥಾಪಕರಾದ ನಿಸಾರ್ ಉಳ್ಳಾಲ, ವ್ಯವಸ್ಥಾಪಕ ನಾಸೀರ್ ಆರ್ ಬಿ ಹಾಗೂ ನಿರ್ವಾಹಕ ಸಮೀರ್ ಸೀಕೋ, ಫೈಝಲ್ ಮಂಚಿ, ನಾಸಿರ್ ಬಿ ಸಿ ರೋಡ್, ಇಫಾಝ್ ಬನ್ನೂರು, ಮುಸ್ತಫಾ ಬೊಳಂತೂರು, ರಿಯಾಝ್ ಟಿಪ್ಪು ನಗರ, ನೌಷಾದ್ ಮಂಚಿ, ಅಜೇಯ್ ಕುಡ್ಲ , ನಿಝಾಮ್ ಬದ್ರಿಯಾ ನಗರ ಉಪಸ್ಥಿತರಿದ್ದರು.
ಅಶ್ರಫ್ ಅರಬಿ ಕಲ್ಲಡ್ಕ ಸ್ವಾಗತಿಸಿ, ಕಾರ್ಯಕ್ರಮನಿರೂಪಿಸಿದರು.