ಕುಂದಾಪುರ: ಕತ್ತಿಯಿಂದ ತನ್ನ ಕತ್ತು, ಮರ್ಮಾಂಗ ಕೊಯ್ದುಕೊಂಡ ಕಾರ್ಮಿಕ !
ಕುಂದಾಪುರ, ಮಾ.10: ಕುಂದಾಪುರ ಬಸ್ ನಿಲ್ದಾಣದ ರಾಮ ಮಂದಿರ ಬಳಿ ರವಿವಾರ ಬೆಳಗ್ಗೆ ಮಾನಸಿಕ ಸ್ಥಿಮಿತ ಕಳೆದುಕೊಂಡ ವಲಸೆ ಕಾರ್ಮಿಕನೊಬ್ಬ ಸಾರ್ವಜನಿಕವಾಗಿ ಕತ್ತಿಯಿಂದ ತನ್ನ ಕುತ್ತಿಗೆ ಹಾಗೂ ಮರ್ಮಾಂಗವನ್ನು ತಾನೇ ಕೊಯ್ದುಕೊಂಡು ಆತಂಕ ಸೃಷ್ಠಿಸಿದ ಘಟನೆ ನಡೆದಿದೆ.
ಕತ್ತಿಯಿಂದ ಕೊಯ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ಕೊಪ್ಪಳ ಜಿಲ್ಲೆಯ ಯಲಬುರ್ಗಿಯ ಮುದಿಯಪ್ಪ(35) ಎಂಬಾತನನ್ನು ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಿ ಕುಂದಾಪು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಒಂದು ತಿಂಗಳ ಹಿಂದೆ ಉಡುಪಿಗೆ ಬಂದಿರುವ ಮುದಿಯಪ್ಪ ಮಲ್ಪೆ ಬಂದರಿನಲ್ಲಿ 15 ದಿನಗಳ ಕಾಲ ಕೆಲಸ ಮಾಡಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಯಿಂದ ಕುಂದಾಪುರದ ಸರ್ವಿಸ್ ಬಸ್ ನಿಲ್ದಾಣದಲ್ಲಿದ್ದ ಈತ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ವಿಪರೀತ ಮದ್ಯ ಸೇವಿಸಿ, ಅಂಗಡಿಯೊಂದರ ಪೆಟ್ಟಿಗೆಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಬಂದು, ಬಸ್ ನಿಲ್ದಾಣದಲ್ಲಿ ತನ್ನ ಪ್ಯಾಂಟ್ ಬಿಚ್ಚಿ ತನ್ನ ಮರ್ಮಾಂಗವನ್ನು ಕತ್ತಿಯಿಂದ ಕೊಯ್ಯುತ್ತಿದ್ದ. ಇದನ್ನು ನೋಡಿದ ಸಾರ್ವ ಜನಿಕರು ಆತನಿಗೆ ಬೈದಿದ್ದರೆನ್ನಲಾಗಿದೆ. ಅಲ್ಲಿಂದ ಆತ ರಾಮ ಮಂದಿರದ ಕಡೆ ಓಡಿದ್ದು, ದಾರಿ ಮಧ್ಯೆ ತನ್ನ ಕುತ್ತಿಗೆಯನ್ನು ಕತ್ತಿಯಿಂದ ಕೊಯ್ದುಕೊಂಡನು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.
ನಂತರ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಪೊಲೀಸರು ಆತನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಬಳಿಕ ಸಾರ್ವಜನಿಕರ ಸಹಕಾರದೊಂದಿಗೆ ಆತನ ಕೈಯ್ಯಲ್ಲಿದ್ದ ಕತ್ತಿಯನ್ನು ಪಡೆದು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈತನ ಒಂದು ಕೈಯಲ್ಲಿ ಅಮ್ಮ ಇನ್ನೊಂದು ಕೈಯಲ್ಲಿ ಮಂಜುಳಾ ಎಂದು ಅಚ್ಚೆ ಹಾಕಲಾಗಿದೆ.
ಮನೆ ವಿಳಾಸ, ಮೊಬೈಲ್ ನಂಬರ್ಗಳನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ಕುಂದಾಪುರಕ್ಕೆ ಬಂದ ಕಾರಣ ತಿಳಿಸುತ್ತಿಲ್ಲ. ಅಸ್ಪಷ್ಟವಾದ ಹೇಳಿಕೆಯನ್ನು ನೀಡು ತ್ತಿರುವ ಈತ ಮಾನಸಿಕ ಅಸ್ವಸ್ಥನಂತೆ ಕಂಡು ಬರುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.