ದೇರೆಬೈಲ್ ಚರ್ಚ್ ಬಸ್ ತಂಗುದಾಣ ಉದ್ಘಾಟನೆ
ಮಂಗಳೂರು, ಮಾ.11: ದೇರೆಬೈಲ್ ಚರ್ಚ್ ಬಸ್ ತಂಗುದಾಣವನ್ನು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಧರ್ಮಗುರು ವಂ.ಆಸ್ಟಿನ್ ಪೆರಿಸ್, ಶಶಿಧರ್ ಹೆಗಡೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಐವನ್ ಡಿಸೋಜ ಅವರನ್ನು ಕೆಥೋಲಿಕ್ ಸಭಾ ದೇರೆಬೈಲ್ ಘಟಕದಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕೆಥೋಲಿಕ್ ಸಭಾದ ದೇರೆಬೈಲ್ ಘಟಕದ ಅಧ್ಯಕ್ಷ ಜೂಲಿಯಟ್ ಡಿಸೋಜ, ಲಿಜ್ಜಿ ಫೆರ್ನಾಂಡಿಸ್, ಮೇಬಲ್ ಫೆರ್ನಾಂಡಿಸ್, ಒಸ್ವಾಲ್ಡ್ ಡಿಸೋಜ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಶೆಟ್ಟಿ, ಗುತ್ತಿಗೆದಾರ ಪಿಯುಸ್ ಮೊಂತೆರೊ, ಸಾಹಿತಿ ಹುಸೈನ್ ಕಾಟಿಪಳ್ಳ, ಮನಪಾ ಸದಸ್ಯ ನವೀನ್ ಡಿಸೋಜ, ಉದ್ಯಮ ಶೇಖರ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಎಂ.ರಾಮಚಂದ್ರ, ಶ್ರೀಧರ ಪಾಂಜ, ಅಶೋಕ, ಸೀತಾರಾಮ ಶೆಟ್ಟಿ, ಎಂ.ಮಲ್ಲಿಕಾರ್ಜುನ, ಸತೀಶ್ ಅಮೀನ್, ಪ್ರತಿಭಾ, ಮಮತಾ ಶೆಟ್ಟಿ, ಸೆಲಿನ್ ಕೊರೆಯ, ಐವನ್ ಪಿಂಟೊ, ರೊನಿ ಡಿಸೋಜ, ದೇರೆಬೈಲ್ ಅಧ್ಯಕ್ಷ ಲ್ಯಾನ್ಸಿ ಮೊಂತೆರೊ ಮತ್ತಿತರರಿದ್ದರು.
Next Story