ಡಾ.ಯು.ಉಪೇಂದ್ರ ಕಾಮತ್ ಶೇವಗೂರ್ ನಿಧನ
ಮಂಗಳೂರು, ಮಾ.11: ಶ್ರೀಸತ್ಯಸಾಯಿ ನರ್ಸಿಂಗ್ ಹೋಮ್ನ ಮಾಲಕ, ಜನಪ್ರಿಯ ವೈದ್ಯ, ಈಶ್ವರಾಂಭ ಟ್ರಸ್ಟ್ನ ಅಧ್ಯಕ್ಷ ಡಾ.ಯು.ಉಪೇಂದ್ರ ಕಾಮತ್ ಶೇವಗೂರ್ ಮಂಗಳೂರಿನ ಸ್ವಗೃಹದಲ್ಲಿ ಸೋಮವಾರ ನಿಧನ ಹೊಂದಿದರು.
ಮೃತರು ಶ್ರೀಸತ್ಯಸಾಯಿ ಸೇವಾ ಸಂಸ್ಥೆಯಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
Next Story