ಕಾಪಿಕಾಡು ಮಸೀದಿ ಶಿಲಾನ್ಯಾಸ: ತಾಜುಲ್ ಉಲಮಾ ಸುನ್ನಿ ಸೆಂಟರ್ ಉದ್ಘಾಟನೆ
ಬಂಟ್ವಾಳ, ಮಾ. 11: ಇರಾ ಗ್ರಾಮದ ಕಾಪಿಕಾಡಿನಲ್ಲಿ ನೂತನವಾಗಿ ತಾಜುಲ್ ಉಲಮಾ ಸುನ್ನಿ ಸೆಂಟರ್ ಹಾಗೂ ನಮಾಜ್ ಮಸೀದಿಗೆ ಪ್ರಖ್ಯಾತ ಧಾರ್ಮಿಕ ನಾಯಕರಾದ ಅಸ್ಸೈಯದ್ ಮುಸ್ತಾಕುಲ್ ರಹ್ಮಾನ್ ತಂಙಳ್ ಚಟ್ಟೆಕ್ಕಲ್ ಶಿಲಾನ್ಯಾಸ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಮಸೀದಿಯ ಮಾಜಿ ಅಧ್ಯಕ್ಷರಾದ ಟಿ. ಅಬೂಬಕರ್ ತೋಟ, ಇಸ್ಮಾಯಿಲ್ ದರ್ಬೆ, ತಾಜುಲ್ ಉಲಮಾ ಸುನ್ನಿ ಸೆಂಟರ್ ಅಧ್ಯಕ್ಷ ಮುಹಮ್ಮದ್ ಕುಂಞಿ, ಕಾರ್ಯದರ್ಶಿ ಮುಹಮ್ಮದ್ ಕಾಪಿಕಾಡು, ಉಪಾಧ್ಯಕ್ಷರಾದ ಟಿ. ಉಸ್ಮಾನ್ ತೋಟ, ಹಜ್ಜತುಲ್ ಇಸ್ಲಾಮ್ ಯುವ ಸಂಘಟನೆಯ ಅಧ್ಯಕ್ಷ ಅಬ್ದುಲ್ ರಝಾಕ್ ದರ್ಬೆ, ಗಣ್ಯರಾದ ಮಹ್ಮೂದ್ ಸಅದಿ, ಅಬ್ಬಾಸ್ ಕಾಪಿಕಾಡು, ಉಮರ್ ಕುಂಞಿ ದರ್ಬೆ, ಅಬ್ಬಾಸ್ ಹರ್ಬಾರ್, ಅಬ್ದುಲ್ ಹಮೀದ್ ಮದನಿ, ಉಮರ್ ಸಿಂಗಾರಿ, ಮುಹಮ್ಮದ್ ಕುಂಞಿ ಬೈಲ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಪತ್ತುಮುಡಿ, ತೌಸೀಫ್ ಕಾಪಿಕಾಡು, ಅಬ್ದುಲ್ ಜಲೀಲ್, ಸಫ್ವಾನ್ ಕಾಪಿಕಾಡು, ಹಮೀದ್ ಮಾಸ್ಟರ್ ದರ್ಬೆ, ಅಬ್ದುಲ್ ಹಮೀದ್ ಕಾಪಿಕಾಡು, ಅಬ್ದುಲ್ ಸಲಾಮ್ ಕುಕ್ಕಾಜೆ, ಅಬ್ದುಲ್ ರಹ್ಮಾನ್ ಪತ್ತುಮುಡಿ ಈ ಸಂದರ್ಭದಲ್ಲಿ ಹಾಜರಿದ್ದರು.