ಲೋಕಸಭಾ ಚುನಾವಣೆ: ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಿದ್ಧತಾ ಸಭೆ
ಮಂಗಳೂರು, ಮಾ13: ಎಪ್ರಿಲ್ನಲ್ಲಿ ನಡೆಯುವ ದ.ಕ.ಲೋಕಸಭಾ ಚುನಾವಣೆಯ ಜಿಲ್ಲಾ ಯುವ ಕಾಂಗ್ರೆಸ್ನ ಸಿದ್ಧತಾ ಸಭೆಯು ಬುಧವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಚುನಾವಣಾ ಕಣದಲ್ಲಿ ಅಭ್ಯರ್ಥಿ ಯಾರು ಎಂಬುದು ಮುಖ್ಯವಲ್ಲ. ಹೈಕಮಾಂಡ್ ಯಾರನ್ನೇ ಆಯ್ಕೆ ಮಾಡಿದರೂ ಯುವ ಕಾಂಗ್ರೆಸ್ ಕಾರ್ಯಕರ್ತರು ರಣೋತ್ಸಾಹದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ನಿಷ್ಠೆಯಿಂದ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಜಿಲ್ಲೆಯ ಎಲ್ಲಾ ಬ್ಲಾಕ್ ಮತ್ತು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕಗಳು ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿದ್ದು, ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಗತ ವೈಭವ ಮರುಕಳಿಸಲಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಲುಕ್ಮಾನ್, ಇತರ ಪದಾಧಿಕಾರಿಗಳಾದ ಕಿರಣ್ ಬಡ್ಲಿಗುತ್ತು, ಚಂದ್ರಹಾಸ ಸನಿಲ್, ಸಿದ್ಧೀಕ್ ಕೋಕೋ, ಗಿರೀಶ್ ಆಳ್ವ, ಮೆರಿಲ್ ರೇಗೋ, ಅಭಿನಂದನ್ ಹರೀಶ್ ಕುಮಾರ್, ವರುಣ್ರಾಜ್ ಅಂಬಟ್, ಲಾರೆನ್ಸ್ ಡಿಸೋಜ, ಚಿತ್ತರಂಜನ್ ಶೆಟ್ಟಿ, ಸರ್ಫರಾಜ್, ರಮಾನಂದ ಪೂಜಾರಿ, ಎಸ್.ಕೆ. ಸೌಹಾನ್, ಶರೀಫ್ ಕಂಠಿ, ನವಾಝ್ ಬಂಟ್ವಾಳ, ಲಕ್ಷ್ಮಣ್ ಶೆಣೈ, ಹರಿಪ್ರಸಾದ್ ಕೆ.ಕೆ, ಅನ್ಸಾರುದ್ಧೀನ್ ಸಾಲ್ಮರ ಮತ್ತಿತರರು ಉಪಸ್ಥಿತರಿದ್ದರು.