ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ
ಮಂಗಳೂರು, ಮಾ.14: ನಗರದ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಸಂಶೋಧನಾ ವಿಭಾಗದ ವತಿಯಿಂದ‘ಪೌಷ್ಟಿಕ ಆಹಾರಗಳಲ್ಲಿ ಇತ್ತೀಚಿಗಿನ ಬೆಳವಣಿಗೆಗಳು ಮತ್ತು ಭವಿಷ್ಯದ ನಿರೀಕ್ಷೆಗಳು’ ಎಂಬ ವಿಷಯದಲ್ಲಿ ಗುರುವಾರ ಕಾಲೇಜಿನ ಎಲ್ಸಿಆರ್ಐ ಸಭಾಂಗಣದಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹೈದರಾಬಾದ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಶನ್ ಸಂಸ್ಥೆಯ ವಿಜ್ಞಾನಿ ಡಾ.ಆರ್. ಅನಂತನ್ ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಅಪೌಷ್ಟಿಕತೆಯಿಂದ ಆರೋಗ್ಯ ಸಮಸ್ಯೆಗಳು ಬರುತ್ತವೆ. ಆದುದರಿಂದ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಸಂಸ್ಕರಿಸಿದ ಆಹಾರವನ್ನು ತಿರಸ್ಕರಿಸಬೇಕು. ಅಪೌಷ್ಟಿಕತೆಯನ್ನು ತೊಲಗಿಸುವತ್ತ ಚಿಂತನೆಯನ್ನು ಮಾಡಬೇಕು ಮತ್ತು ಹೇರಳವಾದ ಸೂಕ್ಷ್ಮಪೋಷಕಾಂಶಗಳಿಂದ ಕೂಡಿದ ಆಹಾರವನ್ನು ಉತ್ಪಾದಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅಧ್ಯಕ್ಷತೆ ವಹಿಸಿದ್ದರು.
ಮತ್ತೋರ್ವ ವಿಜ್ಞಾನಿ ಡಾ. ಎಸ್.ಎಂ. ವಿಜಯಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕಾರ್ಯಕ್ರಮದ ಸಂಯೋಜಕಿ ಡಾನಿಯೆಲ್ಲಾ ಆನ್ಚಿನ್, ಸ್ಟಾರ್ ಕಾಲೇಜಿನ ಯೋಜನೆಯ ನಿರ್ದೇಶಕ ಡಾ. ರೊನಾಲ್ಡ್ ನಜರೆತ್ವಿಭಾಗ ಮುಖ್ಯಸ್ಥ ಡಾ.ಎಸ್.ಎನ್. ರಾಘವೇಂದ್ರ ಉಪಸ್ಥಿತರಿದ್ದರು. ರೆ.ಡಾ.ಲಿಯೋ ಡಿಸೋಜ ಹಾಗೂ ಕುಲಸಚಿವ ಡಾ. ಎ.ಎಂ. ನರಹರಿ ಪಾಲ್ಗೊಂಡಿದ್ದರು.
ಎಲ್ಸಿಆರ್ಐ ಬ್ಲಾಕ್ನ ನಿರ್ದೇಶಕ ಡಾ.ರಿಚರ್ಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಪ್ರಾಧ್ಯಾಪಕ ಅಶೋಕ್ ಕುಮಾರ್ ಸಿ. ಮತ್ತು ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು. ಡಾನಿಯೆಲ್ಲಾ ಚಿನ್ ವಂದಿಸಿದರು.