ಬೈಕ್ ಢಿಕ್ಕಿ, ಸೈಕಲ್ ಸವಾರ ಸಾವು
ಕುಂದಾಪುರ, ಮಾ.14: ಬುಧವಾರ ರಾತ್ರಿ 8:35ರ ಸುಮಾರಿಗೆ ಕುಂಭಾಶಿ ಗ್ರಾಮದ ಸ್ವಾಗತ ಗೋಪುರದ ಬಳಿ ಪಟಗಾರ್ಬೆಟ್ಟು ಕ್ರಾಸ್ ಬಳಿ ರಾಷ್ಟ್ರೀ/ಯ ಹೆದ್ದಾರಿ 66ರಲ್ಲಿ ಬೈಕ್ ಒಂದು ಎದುರಿನಿಂದ ಸೈಕಲ್ನಲ್ಲಿ ಹೋಗುತಿದ್ದ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದೆ ಕುಳಿತಿದ್ದ ಸಾರ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ನಿತೇಶ್ ಎಂದು ಗುರುತಿಸಲಾಗಿದೆ. ಅವರು ಕುಂಭಾಶಿ ಅಂಬೇಡ್ಕರ್ ನಗರದ ದಾಸ ಎಂಬವರ ಪುತ್ರ ಪ್ರಶಾಂತ್ (26)ರ ಸೈಕಲ್ನಲ್ಲಿ ಕುಳಿತು ಹೋಗುತಿದ್ದಾಗ ಹಿಂದಿನಿಂದ ತೆಕ್ಕಟ್ಟೆಯಿಂದ ಕುಂದಾಪುರದಿಂದ ವೇಗವಾಗಿ ಚಲಿಸುತಿದ್ದ ಮೋಟಾರು ಸೈಕಲ್ ಡಿಕ್ಕಿ ಹೊಡೆದಿತ್ತು. ಇಬ್ಬರು ಸವಾರರೂ ರಸ್ತೆಗೆ ಬಿದ್ದು ನಿತೀಶ್ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.
ಪ್ರಶಾಂತ್ ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರೆ, ಬೈಕ್ ಸವಾರ ಆನಂದ್ ಶೆಟ್ಟಿ, ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story