ದೋಣಿ ಮುಳುಗಡೆ; ಮೀನುಗಾರರ ರಕ್ಷಣೆ
ಮಂಗಳೂರು, ಮಾ.15: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಹಿಂದಿರುಗಿ ಬರುವಾಗ ಮುಳುಗಡೆಯಾಗಿದ್ದು, ಒಂಬತ್ತು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ನವಾಝ್ ಎಂಬವರಿಗೆ ಸೇರಿದ ಕೈಝರ್ ಹೆಸರಿನ ದೋಣಿ ಶನಿವಾರ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ಧಕ್ಕೆಗೆ ಬರುತ್ತಿದ್ದಾಗ ಗುರುವಾರ ರಾತ್ರಿ ಸುಮಾರು 30 ನಾಟೆಕಲ್ ಮೈಲು ದೂರದಲ್ಲಿ ದೋಣಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅಪಾಯ ಅರಿತ ಮೀನುಗಾರರು ಮಾಲಕರದ್ದೇ ಇನ್ನೊಂದು ದೋಣಿಯನ್ನು ಸಂಪರ್ಕಿಸಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಿಸಿ ದಡಕ್ಕೆ ತರಲಾಗಿದೆ.
Next Story