ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ
ಉಡುಪಿ, ಮಾ.16: ಉಡುಪಿ ಐಎಂಎ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಸಹಯೋಗದೊಂದಿಗೆ ಸ್ವಚ್ಛ ಭಾರತ ಅಭಿಯಾನವನ್ನು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಉಡುಪಿ ಕರಾವಳಿ ಐಎಂಎ ಅಧ್ಯಕ್ಷ ಡಾ.ಗುರುಮೂರ್ತಿ ಭಟ್, ವೈದ್ಯರು ಗಳಾದ ಅಶೋಕ್ ಕುಮಾರ್ ವೈ.ಜಿ., ರಾಜೇಶ್ವರಿ ಜಿ.ಭಟ್, ರಾಜಗೋಪಾಲ ಭಂಡಾರಿ, ಸಂಜಯ್ ಉಡುಪ, ಆರತಿ ಹೆಬ್ಬಾರ್, ಶ್ರೀಕಿರಣ್ ಹೆಬ್ಬಾರ್, ಉಮೇಶ್ ಪ್ರಭು, ಕೇಶವ ನಾಯಕ್, ನರೇಂದ್ರ ಕುಮಾರ್, ಅಂಜಲಿ ಮುಂಡ್ಕೂರು, ವೈ.ಎಸ್.ರಾವ್, ಸುಧೀರ್ ನಾಯಕ್, ವಾಸುದೇವ ಜಿ.ಆರ್., ದಿನೇಶ್ ನಾಯಕ್, ವಿನಾಯಕ ಶೆಣೈ, ಮಣಿಪಾಲ ಕೆಎಂಸಿ ನಿವೃತ್ತ ಡೀನ್ ಡಾ.ಎನ್. ಆರ್.ರಾವ್ ಮೊದಲಾದವರು ಉಪಸ್ಥಿತರಿದ್ದರು.
ನರ್ಸಿಂಗ್ ಕಾಲೇಜಿನ ಸುಮಾರು 100 ವಿದ್ಯಾರ್ಥಿಗಳು, 20 ವೈದ್ಯರು ಹಾಗೂ ಕೊಂಕಣ ರೈಲ್ವೆ ಸಿಬ್ಬಂದಿಗಳು ಇದರಲ್ಲಿ ಪಾಲ್ಗೊಂಡಿದ್ದರು.
Next Story