ರಾಷ್ಟ್ರದ ಉನ್ನತಿಗೆ ನ್ಯಾಯವಾದಿಗಳ ಕೊಡುಗೆ ಮಹತ್ವದ್ದಾಗಿದೆ -ನ್ಯಾ. ಬಿಎಂ ಶ್ಯಾಂ ಪ್ರಸಾದ್
ಮಂಗಳೂರು, ಮಾ.16: ರಾಷ್ಟ್ರದ ಉನ್ನತಿಗೆ ನ್ಯಾಯವಾದಿಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಬಿ.ಎಂ. ಶ್ಯಾಂ ಪ್ರಸಾದ್ ತಿಳಿಸಿದ್ದಾರೆ.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಸ್ನಾತಕೋತ್ತರ ವಿಭಾಗದ ವತಿಯಿಂದ ಹಮ್ಮಿಕೊಂಡ ‘ಅಂತಾರಾಷ್ಟ್ರೀಯ ವ್ಯಾಪಾರ’ ಅಣಕು ನ್ಯಾಯಾಲಯ ಮತ್ತು ಪುಸ್ತಕ ವಿಮರ್ಶೆ ಬರಹ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಇಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಬೆಳೆಯುತ್ತಿರುವ ತಂತ್ರಜ್ಞಾನವನು ಬಳಸಿಕೊಂಡು ತನ್ನ ವೃತ್ತಿ ಯಲ್ಲಿ ನೈಪುಣ್ಯ ತೋರುವ ಮೂಲಕ ನ್ಯಾಯವಾದಿಗಳು ಸಮರ್ಥವಾಗಿ ನ್ಯಾಯಾಂಗದ ಕಲಾಪಗಳಲ್ಲಿ ತೊಡಗಿಕೊಂಡಾಗ ದೇಶದ ಅಭಿವೃದ್ಧಿಗೆ ಮಹತ್ವದ ಕೊಡಗೆ ನಿಡಬಹುದಾಗಿದೆ ಎಂದು ಶ್ಯಾಂ ಪ್ರಸಾದ್ ಯುವ ನ್ಯಾಯವಾದಿಗಳಿಗೆ ಕಿವಿಮಾತು ಹೇಳಿದರು.
ವಕೀಲ ವೃತ್ತಿಯಲ್ಲಿ ವಾದ ಮಂಡನೆ ಮತ್ತು ನ್ಯಾಯಾಧೀಶರ ಎದುರು ಮನವರಿಕೆಯಾಗುವ ರೀತಿಯಲ್ಲಿ ವಾದ ಮಂಡನೆ ಪ್ರಮುಖ ಅಂಶ.ವಕೀಲ ವೃತ್ತಿಯಲ್ಲಿ ಜೀವನವೀಡಿ ಒಂದು ರೀತಿಯ ಹೋರಾಟ ಇರುತ್ತದೆ. ಈ ಸಂದರ್ಭದಲ್ಲಿ ಉತ್ತಮವಾದ ಮಾತುಗಾರಿಕೆ ಪರಿಣಾಮಕಾರಿಯಾದ ವಾದ ಮಂಡನೆ ನ್ಯಾಯವಾದಿಗಳಿಗೆ ಮುಖ್ಯ ಉತ್ತಮ ವಾದ ಮಂಡನೆಯಿಂದ ಉತ್ತಮ ತೀರ್ಪು ನೀಡಲು ನ್ಯಾಯಾಧೀಶರಿಗೆ ಸಹಾಯವಾಗುತ್ತದೆ ಎಂದು ಮುಂಬೈಯ ಉಚ್ಛ ನ್ಯಾಯಾಲಯದ ನ್ಯಾಧೀಶ ಧಾಮ ಶೇಷಾದ್ರಿ ನಾಯ್ಡು ತಿಳಿಸಿದ್ದಾರೆ.
ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಂಗಳೂರು ಸಿ.ಎಂ.ಆರ್ ವಿಶ್ವ ವಿದ್ಯಾನಿಲಯದ ಮುಖ್ಯಸ್ಥ ಡಾ.ಟಿ.ಆರ್.ಸುಬ್ರಹ್ಮಣ್ಯ ಮಾತ ನಾಡುತ್ತಾ, ವಕೀಲ ವೃತ್ತಿಯಲ್ಲಿ ಅಜ್ಞಾನ ಹೆಚ್ಚು ಅಪಾಯಕಾರಿ.ಹೆಚ್ಚಿನ ಜ್ಞಾನ ಭಂಡಾರ,ಅನುಭವ ದೊಂದಿಗೆ ನ್ಯಾಯಾಲಯದಲ್ಲಿ ಪರಿಣಾಮಕಾರಿಯಾಗಿ ಮಂಡಿಸುವ ರೀತಿ,ಕೌಶಲ್ಯ ಅಗತ್ಯ.ಇದಕ್ಕಾಗಿ ಕಠಿಣ ಪರಿಶ್ರಮ ಅಗತ್ಯ.ವೃತ್ತಿಯ ಜೊತೆಗೆ ಹಿರಿಯರ ಬಗ್ಗೆ ಗೌರವ,ಮಾನವೀಯತೆಯೂ ಮುಖ್ಯ ಎಂದು ಸುಬ್ರಹ್ಮಣ್ಯ ತಿಳಿಸಿದರು.ಸಮಾರಂಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಸ್ವಾಗತಿಸಿದರು.
ಕಾರ್ಯಕ್ರಮದ ಸಂಚಾಲಕಿ ಅನ್ನಪೂರ್ಣಶೇಟ್ ಅತಿಥಿಗಳನ್ನು ಪರಿಚಯಿಸಿದರು.ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಮ್.ಆರ್.ಬಲ್ಲಾಳ್ ವಿದ್ಯಾರ್ಥಿ ಮುಖಂಡರಾದ ಆಶ್ರೀತಾ ಶೆಟ್ಟಿ.ಶ್ರೇಯಾಶೆಟ್ಟಿ,ಅಶ್ವಿನ್ ಕುಟಿನ್ಹಾ,ಅಶ್ವತಿ ಜಯರಾಜ್ ಮೊದಲಾದವರು ಉಪಸ್ಥಿತರಿದ್ದರು.