ಬಿಸಿರೋಡ್ ಸರ್ವಿಸ್ ರಸ್ತೆಯಲ್ಲಿ ಬಸ್ ಸಂಚಾರ ನಿರ್ಬಂದ ತೆರವು: ಎಎಸ್ಪಿಯನ್ನು ಅಭಿನಂದಿಸಿದ ಎಸ್.ಡಿ.ಎ.ಸಿ.ಯು
ಬಂಟ್ವಾಳ, ಮಾ. 16: ಬಿಸಿರೋಡ್ ಸರ್ವಿಸ್ ರಸ್ತೆ ಕಿರಿದಾಗಿ ಸಂಚಾರಕ್ಕೆ ತೊಡಾಕಾಗುತ್ತದೆ ಎಂಬ ಕಾರಣದಿಂದ ಖಾಸಾಗಿ ಮತ್ತು ಸರಕಾರಿ ಬಸ್ ಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸುವುದಕ್ಕೆ ನಿರ್ಬಂದಿಸಿದ್ದನ್ನು ವಿರೋಧಿಸಿದ್ದ ರಿಕ್ಷಾ ಚಾಲಕರು ಮತ್ತು ನಾಗರಿಕರು, ಈ ಸಂಬಂಧ ಎಎಸ್ಪಿ ಸೈದುಲ್ ಅಡಾವಟ್ ಅವರು ಸಮಾಲೋಚನೆ ನಡೆಸಿ ಸರ್ವಿಸ್ ರಸ್ತೆಯಲ್ಲಿ ಬಸ್ಸು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ಸೋಶಿಯಲ್ ಡೆಮೋಕ್ರೆಟಿಕ್ ಆಟೋ ಚಾಲಕರ ಯೂನಿಯನ್ ವತಿಯಿಂದ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಎ.ಸಿ.ಯು ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ, ಪ್ರಧಾನ ಕಾರ್ಯದರ್ಶಿ ಮುಸ್ತಫಾ ಪರ್ಲಿಯ, ಬಂಟ್ವಾಳ ತಾಲೂಕು ಸಂಚಾಲಕ ಮಾಲಿಕ್ ಕೊಳಕೆ, ಅಧ್ಯಕ್ಷ ಯಾಕೂಬ್ ಮದ್ದ, ಉಪಾಧ್ಯಕ್ಷ ಸಂಶುದ್ದೀನ್ ಪಲ್ಲಮಜಲ್, ಸದಸ್ಯರಾದ ನೌಫಲ್ ಮತ್ತಿತರರು ಉಪಸ್ಥಿತರಿದ್ದರು.
Next Story