ಉಡುಪಿಯಲ್ಲಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಳಿಗೆ ಶುಭಾರಂಭ
ಉಡುಪಿ, ಮಾ.17: ಉಡುಪಿಯ ವಿಎಸ್ಟಿ ರಸ್ತೆಯಲ್ಲಿರುವ ಗೀತಾಂಜಲಿ ಸಿಲ್ಕ್ಸ್ ಸಮೀಪದ ವೆಸ್ಟ್ ಕೋಸ್ಟ್ ಕಟ್ಟಡದಲ್ಲಿ ಆರಂಭಗೊಂಡಿರುವ ದಕ್ಷಿಣ ಭಾರತದ ಹೆಸರಾಂತ ಜ್ಯುವೆಲ್ಲರಿಗಳಲ್ಲಿ ಒಂದಾದ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ನ 10ನೇ ಶೋರೂಂ ರವಿವಾರ ಉದ್ಘಾಟನೆಗೊಂಡಿತು.
ಉಡುಪಿ ಜಿಲ್ಲಾ ಖಾಝಿ ಅಲ್ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಿ, ದುವಾ ನೆರವೇರಿಸಿದರು.
ವಜ್ರಾಭರಣ ವಿಭಾಗವನ್ನು ಉದ್ಘಾಟಿಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಇಂದು ಉಡುಪಿ ಸುವರ್ಣ ನಗರ ಆಗುತ್ತಿದೆ. ಸುಲ್ತಾನ್ ಗೋಲ್ಡ್ ಉಡುಪಿ ಜನತೆಗೆ ಉತ್ತಮ ಹಾಗೂ ಗುಣಮಟ್ಟದ ಸೇವೆಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಅನಕಟ್ ಮತ್ತು ಅಮೂಲ್ಯ ಆಭರಣಗಳ ವಿಭಾಗವನ್ನು ಉಡುಪಿ ಕ್ರೈಸ್ತ ವಲಯದ ಪ್ರಧಾನ ಧರ್ಮಗುರು ಅ.ವಂ. ರೆವರೆಂಡ್ ಫಾ. ವಲೇರಿಯನ್ ಮೆಂಡೋನ್ಸ, ಬ್ರೈಡಲ್ ವಿಭಾಗವನ್ನು ಉಡುಪಿ ಜಾಮಿಯ ಮಸೀದಿಯ ಖತೀಬ್ ಮೌಲನಾ ಅಬ್ದುರ್ರಶೀದ್ ನದ್ವಿ ಉಮ್ರಿ, ವಿವಾಹ್ ಮತ್ತು ಸಂಸ್ಕೃತಿ ವಿಭಾಗವನ್ನು ಉಡುಪಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.
ನಗರಸಭಾ ಸದಸ್ಯೆ ಮಾನಸಾ ಸಿ.ಪೈ, ಜೆಮ್ ಮತ್ತು ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ನ ಸದಸ್ಯ ಜಿ. ಜಯ ಆಚಾರ್ಯ, ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ನ ಚೆಯರ್ಮ್ಯಾನ್ ಜೆರ್ರಿ ವಿನ್ಸೆಂಟ್ ಡಯಾಸ್, ಉಡುಪಿ ಸಂಯುಕ್ತ ಜಮಾಅತ್ ಅಧ್ಯಕ್ಷ ಎನ್. ಅಬ್ದುಲ್ಲಾ ಹಾಜಿ ತೌಫೀಕ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಉಜ್ವಲ್ ಗ್ರೂಪ್ ಆಡಳಿತ ನಿರ್ದೇಶಕ ಪುರುಷೋತ್ತಮ ಪಿ.ಶೆಟ್ಟಿ, ವೆಸ್ಟ್ ಕೋಸ್ಟ್ ಗ್ರೂಪ್ ಆಡಳಿತ ನಿರ್ದೇಶಕ ರಾಜಾರಾಂ ಹೆಗ್ಡೆ, ಪರ್ಕಳ ಬಳಕೆದಾರರ ವೇದಿಕೆಯ ಅಧ್ಯಕ್ಷ ಅಬೂಬಕರ್ ಹಾಜಿ ಪರ್ಕಳ, ನೈನಾ ಫ್ಯಾನ್ಸಿಯ ಆಡಳಿತ ನಿರ್ದೇಶಕ ಮುಹಮ್ಮದ್ ಮೌಲಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಹಿರಿಯ ನ್ಯಾಯವಾದಿ ಎ.ಎನ್.ಎಸ್. ಹೆಬ್ಬಾರ್ ಮುಖ್ಯ ಅತಿಥಿಗಳಾಗಿದ್ದರು.
ಸುಲ್ತಾನ್ ಗ್ರೂಪ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಟಿ.ಎಂ. ಅಬ್ದುರ್ರವೂಫ್, ಕಾರ್ಯನಿರ್ವಾಹಕ ನಿರ್ದೇಶಕ ಟಿ.ಎಂ. ಅಬ್ದುರ್ರಹೀಂ ಉಪಸ್ಥಿತರಿದ್ದರು. ಮಾರುಕಟ್ಟೆ ವ್ಯವಸ್ಥಾಪಕ ಆಸೀಫ್ ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿದರು.
ವೈವಿಧ್ಯಮಯ ಆಭರಣಗಳ ಸಂಗ್ರಹ
ಉಡುಪಿಯ ನೂತನ ಶೋರೂಂನಲ್ಲಿ ವಜ್ರ, ಪ್ಲಾಟಿನಂ, ಪೊಲ್ಕಿ, ಅನ್ಕಟ್ ಡೈಮೆಂಡ್ಸ್, ಅಮೂಲ್ಯ ರತ್ನದ ಹರಳುಗಳು, ಚಿನ್ನ, ಬೆಳ್ಳಿ, ಬ್ರಾಂಡೆಡ್ ವಾಚ್ಗಳ ವೈವಿಧ್ಯಮಯ ಸಂಗ್ರಹಗಳು ಗ್ರಾಹಕರಿಗೆ ಲಭ್ಯವಿದೆ.
ನೂತನ ಶೋರೂಂನ ಉದ್ಘಾಟನೆಯ ಅಂಗವಾಗಿ ಒಂದು ಪವನ್ ಚಿನ್ನದ ತಯಾರಿ ವೆಚ್ಚದಲ್ಲಿ 1,250 ರೂ. ರಿಯಾಯಿತಿ, 10 ಸಾವಿರ ರೂ.ಗಿಂತ ಅಧಿಕ ಮೊತ್ತದ ಚಿನ್ನಾಭರಣದ ಖರೀದಿಸುವ ಗ್ರಾಹಕರಿಗೆ ಉಚಿತ ಚಿನ್ನದ ನಾಣ್ಯ ನೀಡಲಾಗುವುದು. ಡೈಮಂಡ್ ಕ್ಯಾರಟ್ ದರದ ಮೇಲೆ 8 ಸಾವಿರ ರೂ. ರಿಯಾಯಿತಿ, ಪೊಲ್ಕಿ, ಅನ್ಕಟ್ ಡೈಮೆಂಡ್ ಹಾಗೂ ಅಮೂಲ್ಯ ಆಭರಣಗಳ ತಯಾರಿ ವೆಚ್ಚದಲ್ಲಿ ಶೇ. 25ರಷ್ಟು ರಿಯಾಯಿತಿ, ಬೆಳ್ಳಿಯ ಮೇಲೆ ಶೇ.10, ಬ್ರಾಂಡೆಡ್ ವಾಚ್ಗಳ ಮೇಲೆ ಶೇ.7ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ.
ಅಲ್ಲದೆ ಪ್ರತಿದಿನ ಹಾಗೂ ತಿಂಗಳ ಲಕ್ಕಿ ಡ್ರಾ ಯೋಜನೆ ಕೂಡಾ ಇದ್ದು, ಪ್ರತಿದಿನದ ಲಕ್ಕಿಡ್ರಾದಲ್ಲಿ ಅಡುಗೆಮನೆ ಸಾಮಗ್ರಿಗಳು ಹಾಗೂ ತಿಂಗಳ ಲಕ್ಕಿ ಡ್ರಾದಲ್ಲಿ ಎಲ್ಇಡಿ ಟಿವಿ, ಫ್ರಿಡ್ಜ್, ವಾಷಿಂಗ್ ಮೆಶಿನ್ಗಳನ್ನು ಗೆಲ್ಲುವ ಸುವರ್ಣವಕಾಶ ಗ್ರಾಹಕರಿಗೆ ನೀಡಲಾಗಿದೆ.