ಕಾರ್ಮಿಕ ಮುಖಂಡ ಗೋಪಾಲ ಮೆಂಡನ್ ನಿಧನ
ಕುಂದಾಪುರ, ಮಾ.17: ಕಾರ್ಮಿಕ ಮುಖಂಡ ಗೋಪಾಲ ಮೆಂಡನ್(58) ಹೃದಯಾಘಾತದಿಂದ ಇಂದು ಬೆಳಗ್ಗೆ ವಡೇರಹೋಬಳಿ ಗ್ರಾಮದ ಬಿಳಿನಾಗನ ಮನೆ ಎಂಬಲ್ಲಿುವ ಸ್ವಗೃಹದಲ್ಲಿ ನಿಧನರಾದರು.
ಕುಂದಾಪುರ ಹಂಚು ಕಾರ್ಮಿಕರಾಗಿದ್ದ ಇವರು, ಡಿವೈಎಫ್ಐ ಬಿ.ಸಿ.ರಸ್ತೆ ಘಟಕದ ಅಧ್ಯಕ್ಷರಾಗಿ, ಸಿಐಟಿಯು ಸಂಘಟನೆಯ ಸದಸ್ಯರಾಗಿದ್ದರು. ಇವರ ಪತ್ನಿ 4 ವರ್ಷದ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಮೃತರು ಇಬ್ಬರು ಸಹೋದರಿ, ಅಳಿಯ, ಸೊಸೆಯಂದಿರನ್ನು ಅಗಲಿದ್ದಾರೆ.
ಇವರು ಊರಿನ ಮಕ್ಕಳ ಅನುಕೂಲಕ್ಕಾಗಿ ಅಂಗನವಾಡಿಗೆ ಹಾಗೂ ಸಮಾಜ ಸೇವೆಗೆ ತನ್ನ ಕುಟುಂಬದ ಭೂಮಿಯನ್ನು ದಾನವಾಗಿ ನೀಡಿದ್ದರು. ಇವರ ಡಿವೈಎಫ್ಐ ಬಿ.ಸಿ.ರಸ್ತೆ ಘಟಕ, ಮುಖಂಡರಾದ ಸುರೇಶ್ ಕಲ್ಲಾಗರ್, ಮಂಜುನಾಥ್ ಶೋಗನ್, ರವಿ ವಿ.ಎಂ. ಸಂತಾಪ ವ್ಯಕ್ತಪಡಿಸಿದ್ದಾರೆ.
Next Story