ಅಕ್ರಮ ಶ್ರೀಗಂಧ ಸಾಗಾಟ: ಆರೋಪಿಗಳು ಖುಲಾಸೆ
ಕುಂದಾಪುರ, ಮಾ.17: ಅಕ್ರಮ ಶ್ರೀಗಂಧದ ಕೊರಡು ಸಾಗಾಟ ಪ್ರಕರಣದ ಮೂವರು ಆರೋಪಿಗಳನ್ನು ಕುಂದಾಪುರ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ನೀಡಿದೆ.
ಸೀತಾರಾಮ, ಚಂದ್ರ ಹಾಗೂ ಅವುಗಳನ್ನು ಖರೀದಿಸಲು ಪ್ರಚೋದನೆ ಮಾಡಿದ ರಂಗನಕೆರೆಯ ಅಬ್ದುಲ್ ಖುಲಾಸೆಗೊಂಡ ಆರೋಪಿಗಳು.
ಉಡುಪಿ ತಾಲೂಕಿನ ಯೆಡ್ತಾಡಿ ಗ್ರಾಮದ ಮೀಸಲು ಅರಣ್ಯದಲ್ಲಿ ಶ್ರೀಗಂಧದ ಮರ ಕಡಿದು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇವರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿ, ಸೊತು್ತಗಳನ್ನು ವಶಪಡಿಸಿ ಕೊಂಡಿದ್ದರು.
ಅದರಂತೆ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದರು. ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.
Next Story