ಸಿನಿಮಾಗಳ ಉದ್ದೇಶ ಕೇವಲ ಮನರಂಜನೆಯಲ್ಲ: ಡಾ. ಪೀಟರ್ ಫೆರ್ನಾಂಡೀಸ್
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 'ಸಿನಿಹಬ್ಬ 2019'
ಮೂಡುಬಿದಿರೆ: ಸಿನಿಮಾದಲ್ಲಿ ಒಳ್ಳೆಯದು ಮತ್ತು ಕೆಟ್ಟದು ಎನ್ನುವ ಪರಿಕಲ್ಪನೆ ಇರುವುದರಿಂದ, ನಾವು ಒಳ್ಳೆಯದನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಕಲಿಕೆ ಎಂಬುದು ತರಗತಿಯಲ್ಲಿ ಮಾತ್ರವಲ್ಲದೆ, ಸಿನಿಮಾ ಮಂದಿರಗಳಿಂದಲೂ ಪಡೆಯಲು ಸಾಧ್ಯ, ಸಿನಿಮಾಗಳ ಉದ್ದೇಶ ಕೇವಲ ಮನರಂಜನೆಯನ್ನು ನೀಡುವುದು ಮಾತ್ರವಲ್ಲದೆ, ಸಮಾಜವನ್ನು ತಿದ್ದುವ ಕಾರ್ಯ ಕೂಡ ಆಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡೀಸ್ ಹೇಳಿದರು.
2 ದಿನಗಳು ನಡೆದ ಸಿನಿ ಹಬ್ಬಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂ.ಬಿ.ಎ ಸೆಮಿನಾರ್ ಹಾಲ್ನಲ್ಲಿ ಚಾಲನೆ ನೀಡಿ ಮಾತನಾಡಿದರು. ಐ.ಎಸ್.ಇ ವಿಭಾಗದ ಮುಖ್ಯಸ್ಥ ಜಯಂತ್ ರಾಥೋಡ್, ಐ.ಎಸ್.ಇ ಫೋರಮ್ ಸಂಯೋಜಕ ಮಂಜುನಾಥ್, ವಿದ್ಯಾರ್ಥಿ ಸಂಯೋಜಕ ಚಂದನ್ ಶಾಸ್ತ್ರಿ ಉಪಸ್ಥಿತರಿದ್ದರು.
ಹುತಾತ್ಮ ಯೋಧರ ಕುಟುಂಬಕ್ಕೆ ನೆರವು
ಸಿನಿ ಹಬ್ಬದಲ್ಲಿ ಸಂಗ್ರಹವಾದ ಮೊತ್ತವನ್ನು ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೊಧರ ಕುಟುಂಬ ಮತ್ತು ಸಮಾಜದ ಅಸಕ್ತರ ನೀಡವುದೆಂದು ನಿರ್ಧರಿಸಲಾಯಿತು. ನಿನಿಮಾ ಪ್ರದರ್ಶನವನ್ನು ವಿದ್ಯಾಗಿರಿಯ ಕುವೆಂಪು ಸಭಾಂಗಣ, ಕೋಟ ಶಿವರಾಮ ಕಾರಂತ ವೇದಿಕೆ ಮತ್ತು ಇಂಜಿನಿಯರಿಂಗ್ ಕಾಲೇಜಿನ ಎಂ.ಬಿ.ಎ ಸೆಮಿನಾರ್ ಹಾಲ್, ಇಂಜಿನಿಯರಿಂಗ್ ಸೆಮಿನಾರ್ ಹಾಲ್ನಲ್ಲಿ ನಡೆಯಿತು.
ಉರಿ, ಬರ್ಡ್ ಬಾಕ್ಸ್, ಅಕ್ವಮಾನ್, ಕೆ.ಜಿ.ಎಫ್, ಗೆಟ್ ಅವುಟ್, ಸ್ಟ್ರಿ, ರಾತ್ಸಾಸನ್, ಅ ಕ್ವೈಟ್ ಪ್ಲೆಸ್, ಗುಲ್ಟೂ, ಡ್ರಾಗ್ ಮಿ ಟೂ ಹೆಲ್ ಸಿನಿಮಾಗಳು ಪ್ರದರ್ಶನಗೊಂಡವು.