ಎಲ್ಲ ರಂಗಗಳಲ್ಲಿಯೂ ನೈತಿಕ ವೌಲ್ಯಗಳ ಅಧಃಪತನ: ನ್ಯಾ.ಸಂತೋಷ್ ಹೆಗ್ಡೆ
ಉಡುಪಿ, ಮಾ.18: ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗಗಳಲ್ಲೂ ಭ್ರಷ್ಟಾಚಾರ ಹಾಗೂ ನೈತಿಕ ಮೌಲ್ಯಗಳ ಅಧಃಪತನ ಕಾಣುತ್ತಿದ್ದೇವೆ. ಇದು ಈ ದೇಶದ ಬಹಳ ದೊಡ್ಡ ದುರಂತ ಎಂದು ಕರ್ನಾಟಕ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ದಶಮಾ ನೋತ್ಸವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಸಾಮಾಜಿಕ ವೌಲ್ಯಗಳ ಅಧಃಪತನ ಹಾಗೂ ಅದರ ಪರಿಣಾಮಗಳು’ ಎಂಬ ವಿಷಯದ ಕುರಿತು ಮಾತನಾಡುತಿದ್ದರು.
ಇಂದು ಸಾಮಾಜಿಕ ಮೌಲ್ಯಗಳು ಬದಲಾಗುತ್ತಿವೆ. ಸಂವಿಧಾನದ ಆಶಯ ಗಳನ್ನು ಅಧಿಕಾರಿ ವರ್ಗ ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುತ್ತಿದೆ. ಸಾಮಾಜಿಕ ಮೌಲ್ಯಗಳ ಬದಲು ಹಣ, ಅಧಿಕಾರಕ್ಕೆ ಗೌರವ ಕೊಡಲಾಗುತ್ತಿದೆ. ಭ್ರಷ್ಟರು ಹಾಗೂ ವೌಲ್ಯ ಇಲ್ಲದವರಿಗೆ ಬಹಿಷ್ಕಾರ ಹಾಕುತ್ತಿದ್ದ ಸಮಾಜ ಇಂದು, ಜೈಲಿಗೆ ಹೋಗಿ ಹೊರಬಂದವರನ್ನು ಅದ್ದೂರಿಯಾಗಿ ಸ್ವಾಗತಿಸುತ್ತಿರುವುದು ವಿಪರ್ಯಾಸ ಎಂದರು.
ದೇಶದ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯೇ ಭಾರತೀಯರೆಲ್ಲ ಒಗ್ಗೂ ಡಲು ಕಾರಣ. ಆದರೆ ಮೌಲ್ಯಾಧಾರಿತ ಸಮಾಜದಲ್ಲಿ ಇಂದು ದುರಾಸೆ ಹೆಚ್ಚಾ ಗುತ್ತಿದೆ. ಈ ಮೂಲಕ ಮಾನವೀಯತೆಯ ಅಧಃಪತನ ಆಗುತ್ತಿದೆ. ಇಂದಿನ ಶಿಕ್ಷಣವು ಹಣ ಗಳಿಸಿ ಶ್ರೀಮಂತರಾಗುವುದು ಮತ್ತು ಅಧಿಕಾರ ಪಡೆಯುವು ದನ್ನು ಹೇಳಿಕೊಡುತ್ತದೆಯೇ ಹೊರತು ನೈತಿಕ ಮೌಲ್ಯಗಳನ್ನಲ್ಲ ಎಂದು ಅವರು ಖೇಧ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದ 543 ಸಂಸದರ ಪೈಕಿ ಕೇವಲ 174 ಮಂದಿ ಮಾತ್ರ ಸಂಸತ್ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ. ಉಳಿದ ವರನ್ನು ನಾವು ಯಾಕೆ ಖರ್ಚು ಮಾಡಿ ಸಂಸತ್ಗೆ ಕಳುಹಿಸಬೇಕು ಎಂಬುದು ಮುಖ್ಯ ಪ್ರಶ್ನೆಯಾಗಿದೆ. ನ್ಯಾಯಾಂಗ ತಳಹದಿ ಕೂಡ ಪ್ರಶ್ನಾರ್ಹವಾಗುತ್ತಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮಾಧ್ಯಮದ ಮುಂದೆ ಹೇಳಿ ಕೊಂಡಿದ್ದು, ಈ ರೀತಿ ಮಾಡಿದರೆ ನ್ಯಾಯಾಂಗ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
2012ರಲ್ಲಿ ಯುಪಿಎ ಸರಕಾರ ಜಾರಿಗೆ ತರಲು ಉದ್ದೇಶಿಸಿದ್ದ ಏಕರೂಪದ ತೆರಿಗೆ ಪದ್ಧತಿ ಜಿಎಸ್ಟಿ ಮಸೂದೆಗೆ ಆಗಿನ ವಿರೋಧ ಪಕ್ಷ ಆಗಿದ್ದ ಎನ್ಡಿಎ ವಿರೋಧ ವ್ಯಕ್ತಪಡಿಸಿತ್ತು. ನಂತರ ಅಧಿಕಾರಕ್ಕೆ ಬಂದ ಎನ್ಡಿಎ ಸರಕಾರ 2016ರಲ್ಲಿ ಅದನ್ನು ಜಾರಿಗೆ ತಂದಿತ್ತು. ಈ ಸಂದರ್ಭ ಎರಡು ಪಕ್ಷಗಳು ರಾಜಿ ಮಾಡಿಕೊಂಡು ರಾಜ್ಯ ಹಾಗೂ ಕೇಂದ್ರ ಎಂಬ ಎರಡು ಜಿಎಸ್ಟಿ ಪದ್ಧತಿ ಯನ್ನು ಜಾರಿಗೆ ತಂದಿತ್ತು. ಹೀಗೆ ದೇಶದಲ್ಲಿ ರಾಜಕೀಯ ವೌಲ್ಯ ಇಲ್ಲವಾಗಿದೆ ಎಂದರು.
ಭಾರತ ಏಕ ಸಂಸ್ಕೃತಿ, ಏಕ ಭಾಷೆ, ಏಕ ಧರ್ಮದ ನಾಡಲ್ಲ. ಇಲ್ಲಿ ಬಹು ಸಂಸ್ಕೃತಿ, ಬಹುಭಾಷೆ, ಬಹುಧರ್ಮಗಳಿರುವುದರಿಂದ ನಾವೆಲ್ಲ ಒಂದಾಗಿ ಬದುಕಬೇಕಾಗಿದೆ. ನಾವೆಲ್ಲರು ಸೇರಿ ಈ ದೇಶವನ್ನು ಶಾಂತಿಯ ತಾಣವನ್ನಾಗಿ ಮಾಡಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ರಾಜ್ಯ ಕಾನೂನು ವಿವಿಯ ಉಪಕುಲಪತಿ ಪ್ರೊ.ಪಿ.ಈಶ್ವರ ಭಟ್ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಪ್ರಕಾಶ್ ಕಣಿವೆ ಸ್ವಾಗತಿಸಿದರು. ಆಲ್ಡ್ರೀನ್ ಪೌಲ್ ವಂದಿಸಿದರು. ಜಾನ್ನೆ ವೆನೆಸ್ಸಾ ಡಿಸಿಲ್ವ ಕಾರ್ಯಕ್ರಮ ನಿೂಪಿಸಿದರು.