ಮಾ.20ರಂದು ಕನ್ನರ್ಪಾಡಿ ದೇವಳದ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ
ಉಡುಪಿ, ಮಾ.18: ಕನ್ನರ್ಪಾಡಿ ಶ್ರೀಜಯದುರ್ಗಾಪರಮೇಶ್ವರಿ ದೇವಸ್ಥಾನ ದ ಜೀರ್ಣೋದ್ಧಾರ ಕಾಮಗಾರಿಯ ಚಾಲನೆ, ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ದಾರು ಮುಹೂರ್ತ ಮತ್ತು ಶಿಲಾ ಮುಹೂರ್ತ ಕಾರ್ಯಕ್ರಮವು ಮಾ. 20ರಂದು ಸಂಜೆ 4:30ಕ್ಕೆ ಜರಗಲಿದೆ.
ದೇವಸ್ಥಾನದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ, ಎನ್.ಮುರಳೀಧರ ಬಲ್ಲಾಳ್, ಕಾಮ ಗಾರಿಗೆ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಚಾಲನೆ ನೀಡಲಿರುವರು. ಬೆಂಗಳೂರು ಬ್ರಹ್ಮರ್ಷಿ ಆನಂದ ಸಿದ್ಧಿಪೀಠಂ ಮಠದ ಡಾ. ಶ್ರೀಮಹರ್ಷಿ ಆನಂದ ಗುರೂಜಿ ಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಲಿರುವರು ಎಂದರು.
ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ದೇವಳದ ಸುತ್ತು ಪೌಳಿ, ನೂತನ ದಾಸೋಹ ಭವನ, ಅಡುಗೆ ಶಾಲೆ, ತೀರ್ಥ ಮಂಟಪ, ಧ್ವಜಸ್ತಂಭಕ್ಕೆ ಬೆಳ್ಳಿ ಕವಚ ನಿರ್ಮಾಣ, ನೂತನ ಸ್ವಾಗತ ಗೋಪುರ ಸೇರಿದಂತೆ ಮುಂತಾದ ಜೀರ್ಣೋದ್ಧಾರ ಕೆಲಸ ಕಾರ್ಯಗಳನ್ನು ನಡೆಸಲಾಗುವುದು. ಒಂದು ವರ್ಷ ದೊಳಗೆ ಈ ಎಲ್ಲ ಕಾಮಗಾರಿ ಮುಗಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಸಂಜೀವ, ಕೋಶಾಧಿಕಾರಿ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಗುರುರಾಜ್ ಉಪಾ ಧ್ಯಾಯ, ನಾರಾಯಣ ರಾವ್, ನಿರುಪಮಾ ಪ್ರಸಾದ್, ಹರಿದಾಸ್ ಭಟ್, ವಿ.ಎಂ.ಸಾಮಗ, ಆಶಾ ಶೆಟ್ಟಿ, ಭಾಸ್ಕರ ಸುವರ್ಣ ಉಪಸ್ಥಿತರಿದ್ದರು.