ಬಸ್ ಪ್ರಯಾಣದಲ್ಲೇ ಮೃತ್ಯು
ಕುಂದಾಪುರ, ಮಾ.18: ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಬಸ್ ಪ್ರಯಾಣದಲ್ಲೇ ಮೃತಪಟ್ಟ ಘಟನೆ ಮಾ.17ರಂದು ಬೆಳಗ್ಗೆ ಕುಂದಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೃತರನ್ನು ಗದಗ ಜಿಲ್ಲೆಯ ರೋಣ ಎಂಬಲ್ಲಿ ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದ ಜಯಪ್ರಕಾಶ ಶೆಟ್ಟಿ(47) ಎಂದು ಗುರುತಿಸಲಾಗಿದೆ. ಇವರು ಮಾ.16ರಂದು ರಾತ್ರಿ ರೋಣದಿಂದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಹೊರಟಿದ್ದು, ಮಾ.17ರಂದು ಬೆಳಗ್ಗೆ ಕುಂದಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ತಲುಪಿತ್ತು. ಅಲ್ಲಿ ಬಸ್ ನಿರ್ವಾಹಕ ಪರಿಶೀಲಿಸಿದಾಗ ಜಯಪ್ರಕಾಶ ಶೆಟ್ಟಿ ಮೃತಪಟ್ಟಿ ರುವುದು ಕಂಡುಬಂತು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story