ಮಾ.20ರಂದು ಯುನಿವೆಫ್ ಕರ್ನಾಟಕ ಬಂಟ್ವಾಳ ಶಾಖೆ ಆರಂಭ
ಮಂಗಳೂರು, ಮಾ.19 ‘ಸಬಲೀಕೃತ ಸದೃಢ ಸಮುದಾಯಕ್ಕಾಗಿ ಸುಶಿಕ್ಷಿತ ಸುರಕ್ಷಿತ ಸಚ್ಚರಿತ ಸಮಾಜಕ್ಕಾಗಿ ಯುನಿವೆಫ್ ಕರ್ನಾಟಕ’ ಎಂಬ ಧ್ಯೇಯ ವಾಕ್ಯದೊಂದಿಗೆ ಮಾರ್ಚ್ 1 ರಿಂದ ಎಪ್ರಿಲ್ 7 ರ ತನಕ ಯುನಿವೆಫ಼್ ಕರ್ನಾಟಕ ಹಮ್ಮಿಕೊಂಡಿರುವ ‘ಬದಲಾವಣೆಗಾಗಿ ನಾನು’ ಸದಸ್ಯತ್ವ ಅಭಿಯಾನದ ಅಂಗವಾಗಿ ಮಾ.20ರಂದು ಸಂಜೆ 7 ಗಂಟೆಗೆ ಫ಼ರಂಗಿಪೇಟೆಯ ಹಳೆಯ ರಸ್ತೆಯಲ್ಲಿರುವ ಝೆಡ್. ಎ. ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಯುನಿವೆಫ಼್ ಬಂಟ್ವಾಳ ಶಾಖೆಯ ಆರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತುಂಬೆ, ಬಿ.ಸಿ.ರೋಡ್, ಮಾರಿಪಳ್ಳ, ಅರ್ಕುಳ, ಬಂಟ್ವಾಳ, ಮೆಲ್ಕಾರ್, ಪಾಣೆಮಂಗಳೂರು ಆಸುಪಾಸಿನ ಸಾರ್ವಜನಿಕರು ಹಾಗೂ ಯುನಿವೆಫ಼್ ಕರ್ನಾಟಕದ ಸದಸ್ಯರಾಗಲು ಬಯಸುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಂಟ್ವಾಳ ಶಾಖಾ ಸಂಚಾಲಕ ಸೈಫ಼ುದ್ದೀನ್ ಕುದ್ರೋಳಿ ಕರೆ ನೀಡಿದ್ದಾರೆ.
ಯುನಿವೆಫ಼್ ಸದಸ್ಯರಾಗಬಯಸುವವರು ಇತರ ಯಾವುದೇ ಸಂಘಟನೆಯಲ್ಲಿ ಸದಸ್ಯರಾಗಿರಬಾರದು. ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಅಥವಾ ಮಸೀದಿ ಮದ್ರಸಗಳಲ್ಲಿ ಸದಸ್ಯರಾಗಿದ್ದರೆ ಅಭ್ಯಂತರ ಇಲ್ಲ. ಆಸಕ್ತರು ಸೈಫ಼ುದ್ದೀನ್ ಕುದ್ರೋಳಿ 9945913824 ಅಥವಾ ಅಬ್ದುಲ್ಲಾ ಪಾರೆ 9964024816 ಇವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.